ʻಆದಿಪುರುಷ್‌ʼಗಾಗಿ ಸಿಎಂ ಯೋಗಿ ಆದಿತ್ಯನಾಥ್: ನಿಜಾನಾ!?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂದೂ ಪುರಾಣಗಳಿಗೆ ಸಂಬಂಧಿಸಿದ ವಿಷಯಗಳು ಮತ್ತು ಭಾರತದ ಇತಿಹಾಸದ ಸುತ್ತ ಸುತ್ತುವ ಕಥೆಗಳು ಸಿನಿಪ್ರಿಯರ ಮನಸೂರೆಗೊಳಿಸುತ್ತಿವೆ. ಈ ನಿಟಿನಲ್ಲಿ ನಿರ್ದೇಶಕರು ಕೂಡ ಪ್ರೇಕ್ಷಕರ ರುಚಿಗೆ ತಕ್ಕಂತೆ ಸಿನಿಮಾಗಳನ್ನು ಉಣಬಡಿಸುತ್ತಿದ್ದಾರೆ.  RRR, ದಿ ಕಾಶ್ಮೀರ್ ಫೈಲ್ಸ್, ಕಾರ್ತಿಕೇಯ 2 ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿನಿಮಾ ಸಂಗ್ರಹಗಳ ಸುನಾಮಿಯನ್ನು ಸೃಷ್ಟಿಸಿತು.  ಅದೇ ಸಾಲಿನಲ್ಲಿ ಪ್ರಭಾಸ್ ಅಭಿನಯದ “ಆದಿಪುರುಷ” ಕೂಡ ಬರಲಿದೆ. ಹಿಂದೂ ಪುರಾಣದ ರಾಮಾಯಣದ ಕಥೆಯೊಂದಿಗೆ ಚಿತ್ರವು ತೆರೆಗೆ ಬರಲಿದೆ.

ಈ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಓಂ ರಾವುತ್ ನಿರ್ದೇಶನದ ಈ ಚಿತ್ರದ ಟೀಸರ್ ಅನ್ನು ದಸರಾ ಸಂದರ್ಭದಲ್ಲಿ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ಯೋಜಿಸುತ್ತಿದ್ದಾರೆ. ಆದಿಪುರುಷ ಚಿತ್ರದ ಟೀಸರ್ ಲಾಂಚ್ ಮಾಡಲು ‘ಅಯೋಧ್ಯೆ’ಗಿಂತ ಉತ್ತಮ ಸ್ಥಳ ಬೇರೊಂದಿಲ್ಲ ಎಂದು ಚಿತ್ರತಂಡ ಭಾವಿಸಿದೆ ಎನ್ನಲಾಗಿದೆ.

ಈ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ಅವರ ಕೈಯಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಬಾಲಿವುಡ್‌ ಟಾಕ್‌ ಆಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅದ್ಧೂರಿ ದೃಶ್ಯ ಪರಿಣಾಮಗಳೊಂದಿಗೆ ತಯಾರಾಗುತ್ತಿರುವ ಈ ಸಿನಿಮಾದ ಮೇಲೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!