ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆದ ಶ್ರದ್ಧಾ ಭೀಕರ ಹತ್ಯೆ ದೇಶ ಬೆಚ್ಚಿ ಬೀಳಿಸಿದ್ದು, ಇದೀಗ ಇಂತಹುದೇ ಇನ್ನೊಂದು ಘಟನೆ ಬಾಂಗ್ಲಾದೇಶದಲ್ಲೂ ನಡೆದಿದೆ. ಇಲ್ಲಿ ಹಂತಕ ಪ್ರೇಮಿ ಗೆಳತಿಯ ಹತ್ಯೆಗೈದು ತುಂಡು ತುಂಡಾಗಿ ಕತ್ತರಿಸಿದ್ದಾನೆ.
ಬಾಂಗ್ಲಾದೇಶದ ಅಬು ಬಕರ್ ಹಿಂದು ಯುವತಿ ಕವಿತಾ ರಾಣಿಯನ್ನು ಭೇಟಿಯಾಗಿ, ಪ್ರೀತಿಸಿ, ಬಳಿಕ ಆಕೆಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.
ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅಬು ಬಕರ್ ನವೆಂಬರ್ 6 ರಂದು ಕೆಲಸಕ್ಕೆ ಹಾಜರಾಗಿರಲಿಲ್ಲ. ಫೋನ್ ಸಂಪರ್ಕಕ್ಕೂ ಸಿಗದಿದ್ದಾಗ ಸಾರಿಗೆ ಸಂಸ್ಥೆಯ ಮಾಲೀಕರು ಕೆಲ ಸಿಬ್ಬಂದಿಯನ್ನು ಆತನ ಬಾಡಿಗೆ ಮನೆಯಕಡೆ ನೋಡಿಕೊಂಡು ಬರುವಂತೆ ಹೇಳಿ ಕಳುಹಿಸಿದ್ದಾರೆ. ಆದರೆ ಅಬು ಬಕರ್ ಮನೆಗೆ ಬೀಗ ಹಾಕಿದ್ದನ್ನು ನೋಡಿ, ಆತ ನಾಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿತ್ತು.
ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನ ಮನೆಗೆ ಬಂದು ಬಾಗಿಲನ್ನು ಒಡೆದು ನೋಡಿದ್ದಾರೆ. ಈ ವೇಳೆ ಪೊಲೀಸರಿಗೆ ಕಂಡಿದ್ದು ಭೀಕರವಾಗಿ ಹತ್ಯೆಯಾಗಿದ್ದ ಯುವತಿ.
ಆಕೆಯ ತಲೆಯನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಪ್ರತ್ಯೇಕವಾಗಿ ಇಡಲಾಗಿತ್ತು. ಆಕೆಯ ಕೈಗಳನ್ನು ಕತ್ತರಿಸಿ ಎಸೆದಿದ್ದು, ಬೇರೆಡೆ ಪತ್ತೆಯಾಗಿತ್ತು.
ಬಳಿಕ ಹತ್ಯೆಯಾದ ಯುವತಿ ಜಮಾಹಿತಿ ಕಲೆಹಾಕಿದ ಪೊಲೀಸರು ಕಾಳಿಪಾಟ್ ಬಾಚಾರ್ ಅವರ ಪುತ್ರಿ ಕವಿತಾ ರಾಣಿ ಎಂದು ಗುರುತಿಸಿದ್ದಾರೆ.
ಅಬು ಬಕರ್ ಮೊದಲೇ ಸಪ್ನಾ ಎಂಬ ಯುವತಿಯೊಂದಿಗೆ ಲಿವ್ ಇನ್ ರಿಲೇಶನ್ನಲ್ಲಿ ಇದ್ದ. ನವೆಂಬರ್ 5 ರಂದು ಸಪ್ನಾ ಕೆಲಸಕ್ಕೆಂದು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಕವಿತಾಳನ್ನು ತನ್ನ ಬಾಡಿಗೆ ಮನೆಗೆ ಕರೆದಿದ್ದಾನೆ. ಆದರೆ ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಬಕರ್ ಯುವತಿಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ಆಕೆಯ ತುಂಡು ತುಂಡಾಗಿ ಬೇರ್ಪಡಿಸಿದ್ದಾನೆ.
ಅದೇ ದಿನ ರಾತ್ರಿ ಅಬು ಬಕರ್ ಸಪ್ನಾ ಜೊತೆಗೆ ರುಪ್ಸಾ ನದಿ ದಾಟಿ ಢಾಕಾಗೆ ತೆರಳಿದ್ದಾನೆ. ಮರುದಿನ ಕವಿತಾ ರಾಣಿಯ ಶವ ತುಂಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ನವೆಂರ್ 6ರ ರಾತ್ರಿ ಪೊಲೀಸರು ಆರೋಪಿ ಅಬು ಬಕರ್ ಇರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಹಂತಕ ಹಾಗೂ ಆತನ ಲಿವ್ ಇನ್ ಪಾರ್ಟ್ನರ್ ಸಪ್ನಾಳನ್ನು ಕೂಡಾ ಗಾಜಿಪುರ ಜಿಲ್ಲೆಯ ಬಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಬಂಧನದ ಬಳಿಕ ಅಬು ಬಕರ್ ತಾನೆಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.