ಅಗ್ನಿಪಥ್ ಯೋಜನೆಗೆ ಸಿಕ್ಕಿತು ಸುಪ್ರೀಂ ಕೋರ್ಟ್​ ಮಾನ್ಯತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಅಗ್ನಿಪಥ್ ಯೋಜನೆಗೆ ಸುಪ್ರೀಂ ಕೋರ್ಟ್​ ಮಾನ್ಯತೆ (Agnipath scheme valid) ನೀಡಿದೆ.

ಕೇಂದ್ರ ಸರ್ಕಾರದ ಇಷ್ಟಾನುಸಾರ, ಏಕಪಕ್ಷೀಯ ಯೋಜನೆ ಅದಲ್ಲ ಎಂದು ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ (ಏಕಪಕ್ಷೀಯ) ಸೋಮವಾರ ಎತ್ತಿಹಿಡಿದಿದೆ.

ರಕ್ಷಣ ಪಡೆಗಳಲ್ಲಿ ಯುವ ಜನತೆಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವಯೋಜನೆಯ ವಿರುದ್ಧ ಸಲ್ಲಿಸಲಾಗಿದ್ದ ಎರಡು ಮೇಲ್ಮನವಿಗಳನ್ನು ಕೋರ್ಟ್​​ ತಿರಸ್ಕರಿಸಿದೆ.

ಯೋಜನೆ ಜಾರಿಯಾಗುತ್ತಿದ್ದಂತೆ ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್ ನಲ್ಲಿ ಯೋಜನೆಯನ್ನು ಪ್ರಶ್ನಿಸಲಾಗಿತ್ತು. ಆದರೆ ದೆಹಲಿ ಕೋರ್ಟ್​​ ಅಗ್ನಿಪಥ್ ಯೋಜನೆಯ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಮೇಲ್ಮನವಿಗಳನ್ನು ಸಲ್ಲಿಸಲಾಯಿತು.

ಈ ವೇಳೆ ಸುಪ್ರೀಂ , ಕ್ಷಮಿಸಿ, ನಾವು ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಹೈಕೋರ್ಟ್ ಎಲ್ಲಾ ಅಂಶಗಳೊಂದಿಗೆ ವ್ಯವಹರಿಸಿದೆ ಎಂದು ಸುಪ್ರೀಂಕೋರ್ಟ್ ಗೋಪಾಲ್ ಕ್ರಿಶನ್ ಮತ್ತು ವಕೀಲ ಎಂಎಲ್ ಶರ್ಮಾ ಅವರು ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ್ದ 2 ಪ್ರತ್ಯೇಕ ಅರ್ಜಿಗಳನ್ನು ಇಂದು ವಜಾಗೊಳಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!