ಅಗ್ನಿಪಥ ವಿರೋಧಿಸುವವರು ದೇಶದ್ರೋಹಿಗಳು: ಶಾಸಕ ಯತ್ನಾಳ ಕಿಡಿ

ಹೊಸದಿಗಂತ ವರದಿ ವಿಜಯಪುರ:
ಅಗ್ನಿಪಥ ವಿರೋಧ ಮಾಡುವವರು ದೇಶದ್ರೋಹಿಗಳು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗ್ನಿಪಥ ಯೋಜನೆ ಒಳ್ಳೆಯ ಯೋಜನೆ ಆಗಿದೆ. ಅಗ್ನಿಪಥ ಸಮಾಜದ ವಿರೋಧಿ ಅಲ್ಲ, ಪಾಕಿಸ್ಥಾನದ ವಿರುದ್ಧ ಅಗ್ನಿಪಥ ಆಗಿದೆ ಎಂದರು.
ಭಾರತ ಭಾರತವಾಗಿ ಉಳಿದಿದೆ 2047 ರಲ್ಲಿ ಇಸ್ಲಾಂ ರಾಷ್ಟ್ರ ಮಾಡುವ ದೊಡ್ಡ ಷಡ್ಯಂತ್ರ ಭಾರತದಲ್ಲಿ ನಡೆದಿದೆ. ನಾವು ತಯಾರಿಯಾಗುವ ಕಾಲ ಬಂದಿದೆ ಎಂದರು.
ಎಸ್’ಡಿಎಫ್’ಐ, ಎಫ್’ಡಿಎಫ್ ನವರು ಕುತಂತ್ರ ಮಾಡುತ್ತಿದ್ದಾರೆ. ಮಾಜಿ‌ ಉಪ ರಾಷ್ಟ್ರಪತಿ ಪಾಕಿಸ್ಥಾನ ಏಜೆಂಟ್ ಆಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ದೇಶ ವಿರೋಧಿ ಕೆಲಸ ಮಾಡುವವರು ಹಿಂದುಗಳಿಗೆ ಏನ್ ಬೇಕಾದರೂ ಮಾಡಬಹುದು. ಅದಕ್ಕಾಗಿ ನಾವು ತಯಾರಾಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!