ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲೆ ರಷ್ಯ ಯುದ್ಧ ಘೋಷಣೆ ಮಾಡಿದ್ದು, ಉಕ್ರೇನ್ನಲ್ಲಿರುವ ಭಾರತೀಯರನ್ನು ಕರೆತರಲು ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯೆಯೇ ದೆಹಲಿಗೆ ವಾಪಾಸಾಗಿದೆ.
ಈಗಾಗಲೇ ಯುದ್ಧ ಆರಂಭವಾಗಿದ್ದು, ಉಕ್ರೇನ್ ತನ್ನ ಭದ್ರತೆಗಾಗಿ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಸಾವಿರಾರು ಭಾರತೀಯರು ಈಗಲೂ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ.
ಇಂದು ಬೆಳಗ್ಗೆ ಯುದ್ಧ ಘೋಷಣೆಯಾಗಿದೆ. ಘೋಷಣೆ ಬೆನ್ನಲ್ಲೇ ವೈಮಾನಿಕ ದಾಳಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ವಿಮಾನಗಳ ಓಡಾಟ ಅಸುರಕ್ಷಿತ, ಈ ವಿಮಾನಗಳು ಹೆಚ್ಚು ಅಪಾಯದಲ್ಲಿದ್ದು, ಉಕ್ರೇನ್ಗೆ ತೆರಳುವ ಎಲ್ಲಾ ವಿಮಾನಗಳಿಗೆ ಸರ್ಕಾರ ಸೂಚನೆ ನೀಡಿದ್ದು, ಇದೀಗ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಾಸಾಗಿದೆ.