ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಿಯಾದ ಸಮಯಕ್ಕೆ ವೃದ್ಧೆಗೆ ವ್ಹೀಲ್ ಚೇರ್ ನೀಡದ ಕಾರಣ , ವೃದ್ಧೆ ಕುಸಿದು ಬಿದ್ದ ಘಟನೆ ನಡೆದಿದೆ.
ಏರ್ ಇಂಡಿಯಾ ಯಡಟ್ಟಿನಿಂದಾಗಿ 82 ವರ್ಷದ ವೃದ್ಧೆ ಈಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುವಂತಾಗಿದೆ. ಮೆದುಳಿನಲ್ಲಿ ರಕ್ತಸ್ರಾವ ಆಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ವೀಲ್ಹ್ಚೇರ್ ವ್ಯವಸ್ಥೆಗೆ ಕೇಳಿಕೊಂಡಿದ್ದರು ಕೂಡ ವೃದ್ಧೆಗೆ ಸರಿಯಾದ ಸಮಯಕ್ಕೆ ಅದರ ವ್ಯವಸ್ಥೆಯಾಗಲಿಲ್ಲ. ಸುಮಾರು ಒಂದು ಗಂಟೆಗಳ ಕಾಲ ಕಾಯ್ದರು ಕೂಡ ಯಾವುದೇ ವ್ಯವಸ್ಥೆಯಾಗುವ ಸೂಚನೆ ಕಂಡು ಬರಲಿಲ್ಲ. ಕೊನೆಗೆ ವೃದ್ಧೆಯ ಕುಟುಂಬ ಬೇರೆ ದಾರಿಯಿಲ್ಲದೆ ಅವರನ್ನು ಕೈಹಿಡಿದುಕೊಂಡು ನಡೆಸಿಕೊಂಡು ಹೊರಟಿದ್ದಾರೆ. ಆದರೆ ಏರ್ಲೈನ್ ಕೌಂಟರ್ನಲ್ಲಿಯೇ ವೃದ್ಧೆ ಕುಸಿದು ಬಿದ್ದಿದ್ದು ಅವರನ್ನು ಬೆಂಗಳೂರಿಗೆ ತಲುಪಿದ ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ .
82 ವೃದ್ಧೆಯ ಮೊಮ್ಮಗಳು ಪರೌಲ್ ಕನ್ವರ್ ಹೇಳುವ ಪ್ರಕಾರ,ನನ್ನ ಅಜ್ಜಿಯನ್ನು ನೀವು ತುಂಬಾ ಕೀಳುಮಟ್ಟದಿಂದ ನಡೆಸಿಕೊಂಡಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಏರ್ ಇಂಡಿಯಾ ವಿರುದ್ಧ ಮೊಮ್ಮಗಳು ಗುಡುಗಿದ್ದಾರೆ. ಇನ್ನು ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ನಮ್ಮ ಕುಟುಂಬ ಮುಂಚಿತವಾಗಿಯೇ ವ್ಹಿಲ್ಚೇರ್ ಬುಕ್ ಮಾಡಿದ್ದೇವು. ನಾವು ಮಾರ್ಚ್ 4ನೇ ತಾರೀಖು ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದೇವೆ. ಆದ್ರೆ ಏರ್ಪೋರ್ಟ್ ತಲುಪಿದಾಗ ಅಲ್ಲಿ ಯಾವುದೇ ವ್ಹೀಲ್ಚೇರ್ ಸೌಲಭ್ಯಗಳು ಸಿಗಲಿಲ್ಲ. ಏರ್ ಇಂಡಿಯಾ ಸಿಬ್ಬಂದಿಗೆ ಪದೇ ಪದೇ ಮನವಿ ಮಾಡದೆವು, ಏರ್ಪೋರ್ಟ್ ಹೆಲ್ಪ್ ಡೆಸ್ಕ್ನಲ್ಲಿ ಕೇಳಿಕೊಂಡೆವು. ಪರ್ಯಾಯ ಏರ್ಲೈನ್ಸ್ ಬಳಿಯೂ ಮನವಿ ಮಾಡಿದೆವು.ಆದರೂ ಕೂಡ ಯಾವುದೇ ರೀತಿಯ ಸಹಾಯ ನಮಗೆ ಸಿಗಲಿಲ್ಲ. ನಮಗೆ ಬೇರೆ ದಾರಿ ಕಾಣದೇ ನಮ್ಮ ಅಜ್ಜಿಯನ್ನು ನಿಧಾನವಾಗಿ ನಡೆಸುಕೊಂಡು ಕರೆದು ಹೊರೆಟೆವು. ಏರ್ಪೋರ್ಟ್ ಒಳಗೆ ಪ್ರವೇಶ ಪಡೆಯುವವರೆಗೂ ಅವರು ಸಹಕರಿಸಿದರು. ಅಲ್ಲಿಯವರೆಗೆ ನಡೆದುಕೊಂಡು ಬಂದರೂ ಕೂಡ ಯಾವುದೇ ವ್ಹೀಲ್ ಚೇರ್ ವ್ಯವಸ್ಥೆಯಾಗಲಿಲ್ಲ. ಕೊನೆಗೆ ನಮ್ಮ ಅಜ್ಜಿ ಕಾಲು ಜಾರಿ ಕುಸಿದು ಬಿದ್ದಳು. ಆದರೂ ಕೂಡ ಸಹಾಯಕ್ಕೆ ಯಾರೊಬ್ಬರು ಕೂಡ ಬರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಮ್ಮ ಅಜ್ಜಿಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡುವ ಗೋಜಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಹೋಗಲಿಲ್ಲ. ಈ ಘಟನೆಯಾದ ನಂತರ ವ್ಹೀಲ್ ಚೇರ್ ತರಲಾಯಿತು. ಬಿದ್ದ ಸ್ಥಿತಿಯಲ್ಲಿಯೇ ಅಜ್ಜಿಯನ್ನು ಫ್ಲೈಟ್ನಲ್ಲಿ ಕೂರಿಸಿಕೊಂಡು ಬರಲಾಯ್ತು. ಬೆಂಗಳೂರಿಗೆ ಬಂದ ತಕ್ಷಣ ವೈದ್ಯಕೀಯ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯ್ತು. ಸದ್ಯ ಅಜ್ಜಿಗೆ ಎರಡು ಹೋಲಿಗೆಗಳು ಬಿದ್ದಿವೆ. ಇದೆಲ್ಲವನ್ನೂ ನಾನು ಐಸಿಯುನಲ್ಲಿ ಕುಳಿತುಕೊಂಡೇ ಬರೆಯುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ನಮ್ಮ ಅಜ್ಜಿಯನ್ನು ಐಸಿಯುನಲ್ಲಿ ಆಬ್ಸ್ರ್ವೇಷನ್ನಲ್ಲಿ ಇಟ್ಟಿದ್ದಾರೆ ಎಂದು ಕನ್ವರ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಆದ ಘಟನೆಯ ಬಗ್ಗೆ ಖೇದವಿದೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಬೇಗ ಗುಣಮುಖರಾಗಲಿ ಎಂದು ನಾವು ಬೇಡಿಕೊಳ್ಳುತ್ತೇವೆ. ಎಲ್ಲಿ ತಪ್ಪಾಯಿತು ಏಕಾಯಿತು ಮತ್ತು ಯಾರಿಂದಾಯಿತು ಎನ್ನುವುದರ ಬಗ್ಗೆ ಈಗಾಗಲೇ ತನಿಖೆ ಶುರು ಮಾಡಿದ್ದೇವೆ. ತದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದೇವೆ ಎಂದು ಹೇಳಿದೆ.