ಹೊಸ ದಿಗಂತ ಡಿಟಿಎಲ್ ಡೆಸ್ಕ್:
ಪಾಕಿಸ್ತಾನವು ಕೆಲ ದಿನಗಳ ಹಿಂದೆ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಿಂದ 16 ನಾಗರಿಕರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ವಿಶ್ವದ ಅನೇಕ ರಾಷ್ಟ್ರಗಳು ಪಾಕ್ ಕೃತ್ಯವನ್ನು ವ್ಯಾಪಕವಾಗಿ ಖಂಡಿಸಿದ್ದು, ಇದೀಗ ಬಾರತವು ಕೂಡ ಪಾಕ್ ನಡೆಯನ್ನು ಖಂಡಿಸಿದೆ.
ಈ ಕುರಿತು ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕ್ ನ ಈ ಕೃತ್ಯವನ್ನು ಭಾರತ ಬಲವಾಗಿ ಖಂಡಿಸುತ್ತದೆ. ಇದರಿಂದಾಗಿ ಅಲ್ಲಿನ ನಾಗರಿಕರ ಸಾವು, ಹಾಗೂ ಮೂಲ ಸೌಕರ್ಯಗಳ ನಾಶವಾಗಿದೆ ಎಂದು ತಿಳಿಸಿದೆ.
ಯಾವುದೇ ರಾಷ್ಟ್ರವಾದರೂ ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂದು ಭಾರತ ತಿಳಿಸುತ್ತದೆ ಎಂದು ಹೇಳಿದರು.



