ಮೈಸೂರಿನಲ್ಲಿ ಆದಿಲ್ ಖಾನ್ ಮನೆ ಮುಂದೆ ರಾಖಿ ಹೈಡ್ರಾಮಾ, ಬಾಗಿಲು ತೆಗೆಯಿರಿ ಅಂತ ಕಣ್ಣೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಾಖಿ ಸಾವಂತ್ ಇದೀಗ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಆದಿಲ್ ಖಾನ್ ಮನೆ ಮುಂದೆ ಸಿಕ್ಕವರಿಗೆಲ್ಲಾ ಕಷ್ಟ ಹೇಳಿಕೊಳ್ತಾ ಬಾಗಿಲು ತೆಗೆಯಿರಿ ಎಂದು ಅಳುತ್ತಿದ್ದಾರೆ.

ಆದಿಲ್ ನನ್ನ ಪತಿ, ನಮ್ಮ ಅತ್ತೆ ಮನೆಗೆ ನನಗೆ ಎಂಟ್ರಿ ಇಲ್ಲದಂತಾಗಿದೆ, ನನ್ನನ್ನು ಒಳಗೆ ಸೇರಿಸಿಕೊಳ್ಳಿ ಎಂದು ಕುಳಿತಿದ್ದಾರೆ. ನಾನು ಹಿಂದೂ ಅಂತ ನನ್ನನ್ನು ದೂರ ಮಾಡ್ತಿದ್ದೀರ, ಆದಿಲ್‌ಗಾಗಿ ಮುಸ್ಲಿಂ ಆಗಿ ಬದಲಾಗಿದ್ದೇನೆ ಇನ್ನೇನು ಬೇಕು? ನನ್ನ ಬಳಿ ಕೋಟಿ ಕೋಟಿ ಸಾಲ ಪಡೆದಿದ್ದಾನೆ, ಅದನ್ನು ಯಾರು ಕೊಡುತ್ತಾರೆ ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.

ಮೈಸೂರು ಬೇಡ, ನಾನು ಮುಂಬೈಗೆ ಬರುತ್ತೇನೆ ಎಂದು ಆದಿಲ್ ಹೇಳಿದ್ದ ಮೈಸೂರಿನ ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ, ನ್ಯಾಯ ಸಿಗುವವರೆಗೂ ಇಲ್ಲೇ ಇರುತ್ತೇನೆ ಎಂದು ರಾಖಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!