ಅತೀಕ್ ಅಹ್ಮದ್ ಹತ್ಯೆಯ ದ್ವೇಷ ತೀರಿಸಿಕೊಳ್ಳೋಕೆ ಭಾರತದ ಮೇಲೆ ದಾಳಿ ಮಾಡ್ತೀವಿ ಎಂದ ಅಲ್‌ಖೈದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಆಶ್ರಫ್ ಹತ್ಯೆಯ ಸೇಡನ್ನು ತೀರಿಸಿಕೊಳ್ಳೋದಕ್ಕೆ ಭಾರತದ ಮೇಲೆ ದಾಳಿ ಮಾಡ್ತೀವಿ ಎಂದು ಅಲ್‌ಖೈದಾ ಬೆದರಿಕೆ ಹಾಕಿದೆ.

ಅಲ್‌ಖೈದಾ ಉಗ್ರ ಸಂಘಟನೆಯು ಏಳು ಪುಟಗಳ ನಿಯತಕಾಲಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಸಂದೇಶವನ್ನು ಕಳುಹಿಸಲಾಗಿದೆ.

ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಆಶ್ರಫ್‌ರನ್ನು ಹುತಾತ್ಮರು ಎಂದು ಕರೆದಿದ್ದು, ಮುಸ್ಲಿಮರಿಗೆ ಸ್ವತಂತ್ರ ಕೊಡಿಸುತ್ತೇವೆ ಎನ್ನುವ ಭರವಸೆಯನ್ನು ನೀಡಿದೆ. ಅತೀಕ್ ಅಹ್ಮದ್ ಹಾಗೂ ಆಶ್ರಫ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ನಡೆಸುತ್ತೇವೆ ಎಂದು ಹೇಳಿದೆ.

ದಬ್ಬಾಳಿಕೆಯಿಂದ ನಿಮ್ಮನ್ನು ರಕ್ಷಿಸುತ್ತೇವೆ, ಅದು ಅಮೆರಿಕದ ಶ್ವೇತಭವನ ಆಗಿರಬಹುದು ಅಥವಾ ದೆಹಲಿಯ ಪ್ರಧಾನ ಮಂತ್ರಿ ಮನೆಯಾಗಿರಬಹುದು, ರಾವಲ್ಪಿಂಡಿಯ ಜಿಎಚ್‌ಕ್ಯೂ ಆಗಿರಬಹುದು ನಮ್ಮ ಮುಸ್ಲಿಂ ಸಹೋದರ-ಸಹೋದರಿಯರು ಎಲ್ಲಿದ್ದರೂ ಅವರನ್ನು ಬಂಧನದಿಂದ ಮುಕ್ತಗೊಳಿಸಲಾಗುವುದು ಎಂದು ಬರೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!