ಖುಷಿಯ ನಡುವೆ ದ್ವೇಷ-ಟೀಕೆಗಳೆಲ್ಲ ಮರೆತು ಹೋಗುತ್ತೆ: ನಟಿ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಅತೀ ಬ್ಯುಸಿ ಆಗಿರುವ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಮೂಲಕ ಎಷ್ಟು ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ ಹೆಚ್ಚು ಟ್ರೋಲ್ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ.

ಇದೀಗ ರಶ್ಮಿಕಾ ತನ್ನನ್ನು ಟೀಕೆ ಮಾಡುವವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ತನ್ನನ್ನು ದ್ವೇಷಿಸುವವರ ಬಗ್ಗೆ ಸಮಾರಂಭವೊಂದರಲ್ಲಿ ಮನಬಿಚ್ಚಿ ಮಾತನಾಡಿ ಆಕೆ, ನಾವು ಕಲಾವಿದರು, ನಮ್ಮನ್ನು ಎಲ್ಲರೂ ಪ್ರೀತಿಸಬೇಕು ಎಂದು ಭಾವಿಸುವುದು ತಪ್ಪು. ಒಳ್ಳೆಯ ಮಾತುಗಳ ಜೊತೆ ಟೀಕೆಗಳನ್ನ ಕೂಡ ಎದುರಿಸಬೇಕಾಗುತ್ತದೆ. ನಾವು ಪಬ್ಲಿಕ್ ಫಿಗರ್ ಆಗಿರುವ ಕಾರಣ ಇವೆಲ್ಲವೂ ಸರ್ವೇ ಸಾಮಾನ್ಯ. ಜನ ಬಹಳ ಪ್ರೀತಿಯಿಂದ ಗುರುತಿಸಿ ಮಾತನಾಡಿದಾಗ ಖುಷಿಯಾಗುತ್ತದೆ. ಈ ಖುಷಿಯ ನಡುವೆ ದ್ವೇಷ ಮತ್ತು ಟೀಕೆಗಳೆಲ್ಲ ಮರೆತು ಹೋಗುತ್ತದೆ ಎಂದರು.

ಸದ್ಯ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದಳಪತಿ ನಟನೆಯ `ವಾರಿಸು’ (Varisu) ಸಿನಿಮಾ ಕೂಡ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!