ಕೊಲೆಯತ್ನ ಆರೋಪ: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಸಹೋದರಿ ಸಹಿತ ಐವರ ವಿರುದ್ಧ ಎಫ್ ಐ ಆರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲೆಯತ್ನ ನಡೆಸಿದ ಆರೋಪದಡಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಲಗ್ಗೆರೆಯ ನಿವಾಸಿ ಮಹೇಶ್ ಸಹೋದರ ದೂರು ದಾಖಲಿಸಿದ್ದು, ಅದ್ರಂತೆ ಎಫ್ ಐ ಆರ್ ದಾಖಲಾಗಿದೆ
ಮಹೇಶ್ ಹಾಗೂ ಪತ್ನಿ ಶೀಲಾ ನಡುವೆ ಕೌಟುಂಬಿಕ ಕಲಹ ನಡೆದಿತ್ತು. ಇಬ್ಬರ ರಾಜೀಪಂಚಾಯಿತಿ ಮಾಡಲು ಅಖಂಡ ಶ್ರೀನಿವಾಸ್ ಸಹೋದರಿ ಚಂದ್ರಕಲಾ, ಭಾಗ್ಯಮ್ಮ, ಸುನೀತ ಮತ್ತಿತರರು ತೆರಳಿದ್ದರು.ರಾಜೀಪಂಚಾಯ್ತಿಗೆ ಯತ್ನಿಸಿದ್ದಾರೆ. ಈ ವೇಳೆ ಮಹೇಶ್ ಹಾಗೂ ಪತ್ನಿ ಶಿಲ್ಪಾ ನಡುವೆ ವಾಗ್ವಾದ ಆರಂಭಗೊಂಡಿದೆ. ಈ ವೇಳೆ ಮಹೇಶ್ ನನ್ನು ಕೋಣೆಗೆ ಎಳೆದೊಯ್ದು ಚಂದ್ರಕಲಾ, ಭಾಗ್ಯಮ್ಮ, ಸುನೀತ, ಕಾರು ಚಾಲಕ ಸೇರಿ ಐವರು ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದು, ಗಂಭೀರ ಗಾಯಗಳಾಗಿವೆ ಎಂದು ಮಹೇಶ್ ಸಹೋದರ ರಾಜು ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!