ಹೊಸದಿಗಂತ ವರದಿ, ರಾಯಚೂರು :
ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ೪೩ ರಿಂದ ೪೫ ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಕಂಡುಬರುತ್ತಿರುವುದರಿAದ ಜನತೆ ಹೀಟ್ ವೇವ್ಗೆ ಕಂಗಾಲಾಗಿ ಹೋಗಿದ್ದಾರೆ.
ನಿಂತರು, ಕುಂತರೂ ಸಮಾಧಾನವಾಗದ ರೀತಿಯಲ್ಲಿ ಬಿಸಿಲಿನ ಝಳ ಜನತೆಯನ್ನು ಕಾಡುವ ಮೂಲಕ ಕಂಗಾಲಾಗಿಸಿದೆ. ಇದೇ ಬಿಸಿಲಿನಲ್ಲಿ ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಯುವಕರು ಕಬ್ಬಿಣ ಹಂಚನ್ನು ೨ ಗಂಟೆಗಳ ಕಾಲ ಬಿಸಿಲಿನಲ್ಲಿ ಇಟ್ಟು ಕೋಳಿ ಮೊಟ್ಟೆಯ ಅಂಬ್ಲೇಟ್ ತಯಾರಿಸಿ ಸೇವಿಸುವ ಮೂಲಕ ಬಿಸಿಲಿನ ತೀರ್ವತೆ ಎಷ್ಟಿದೆ ಎನ್ನುವುದನ್ನು ಜನತೆಗೆ ತಿಳಿಸಿದ್ದಾರೆ.
ಮನೆಯಲ್ಲಿ, ಆಫೀಸ್ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಸಹ ಈ ಬಿಸಿಲಿನ ಝಳಕ್ಕೆ ತತ್ತರಿಸಿದ್ದಾರೆ. ಉರಿಯುತ್ತಿರುವ ಸೂರ್ಯನ ಶಾಖಕ್ಕೆ ಸ್ವಲ್ಪ ಹೊತ್ತು ಮೈ ಒಡ್ಡಿದರೆ ಸಾಕು ಸುಟ್ಟು ಹೋಗುವಷ್ಟು ತೀವ್ರತೆ ಇದೆ ಎನ್ನುತ್ತಿದ್ದಾರೆ ಜನತೆ.
ಬಿಸಿಲಿನ ತಾಪ ಇದು ಜಸ್ಟ್ ಸ್ಯಾಂಪಲ್ ಇನ್ನೂ ತಾಪಮಾನ ಹೆಚ್ಚಾಗಲಿದೆ ಎನ್ನುವ ಮುನ್ಸೂಚನೆಯು ಹವಾಮಾನ ತಜ್ಞರಿಂದ ದೊರೆತಿದೆ. ಬರುವ ದಿನಗಳಲ್ಲಿ ತಾಪಮಾನ ೫೦ ಡಿಗ್ರಿ ಸೆಲ್ಸಿಯಸ್ ವರೆಗೂ ತಲಪುವ ಸಾಧ್ಯತೆ ಇದೆ ಎನ್ನುವುದು ಇವರ ಅಂದಾಜಾಗಿದೆ.