ದಿಗಂತ ವರದಿ ವಿಜಯಪುರ:
ಆಂಬ್ಯುಲೆನ್ಸ್ ಅಪಘಾತದಲ್ಲಿ ಗರ್ಭಿಣಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಮಧ್ಯೆದ ರಸ್ತೆ ಬಳಿ ನಡೆದಿದೆ.
ಭಾಗ್ಯಶ್ರೀ ಪರಣ್ಣನವರ ಮೃತಪಟ್ಟಿರುವ ಗರ್ಭಿಣಿ. ಭಾಗ್ಯಶ್ರೀಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲೆಯ ತಾಳಿಕೋಟಿಯಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ರವಾನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಭಾಗ್ಯಶ್ರೀ ಅಸುನೀಗಿದ್ದಾಳೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.