ಅಮರಾವತಿ ಉಮೇಶ್ ಹತ್ಯೆ ಪ್ರಕರಣ: NIA ಹೆಗಲಿಗೆ ತನಿಖೆಯ ಹೊಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉಮೇಶ್ ಕೋಲ್ಹೆ ಬರ್ಬರ ಹತ್ಯೆಯ ತನಿಖೆಯನ್ನುಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ನಿರ್ದೇಶನ ನೀಡಿದ್ದಾರೆ.
ಮಹಾರಾಷ್ಟ್ರದ ಅಮರಾವತಿಯ ಅಂಗಡಿ ಮಾಲೀಕ ಉಮೇಶ್ ಕೋಲ್ಹೆ ಅವರ ಜೂನ್ 21 ರಂದು ಫೇಸ್ಬುಕ್ನಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಬರೆದಿದ್ದು, ಈ ಹಿನ್ನೆಲೆ ಅವರನ್ನು ಹತ್ಯೆ ಮಾಡಲಾಗಿತ್ತು .
ಈ ಕುರಿತು ಗೃಹ ಸಚಿವರ ಕಚೇರಿ (ಎಚ್‌ಎಂಒ) ಮಾಹಿತಿ ನೀಡಿದ್ದು, ‘ಜೂನ್ 21 ರಂದು ಅಮರಾವತಿ ಮಹಾರಾಷ್ಟ್ರದಲ್ಲಿ ಉಮೇಶ್ ಕೋಲ್ಹೆ ಅವರ ಬರ್ಬರ ಹತ್ಯೆಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಎಂಎಚ್‌ಎ ಎನ್‌ಐಎಗೆ ಹಸ್ತಾಂತರಿಸಿದೆ’ ಎಂದು ಹೇಳಿದೆ.
ಹತ್ಯೆಯ ಹಿಂದಿನ ಪಿತೂರಿ, ಸಂಘಟನೆಗಳ ಪಾಲ್ಗೊಳ್ಳುವಿಕೆ ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುವುದು’ ಎಂದು ನಿರ್ದೇಶಿಸಲಾಗಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!