ಅಮೃತಯಾತ್ರೆ: ಆರುದಶಕಗಳಿಂದ ನಿರಂತರವಾಗಿ ಹೆಚ್ಚುತ್ತಿದೆ ರಸಗೊಬ್ಬರ ಉತ್ಪಾದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹೊತ್ತಲ್ಲಿ ದೇಶದಲ್ಲಿ ರಸಗೊಬ್ಬರ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಿರುವುದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಭಾರತವು ಈಗಲೂ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ ಎಂಬುದು ನಿಜವೇ ಆದರೂ ಈ ನಿಟ್ಟಿನಲ್ಲಿ ಸ್ವಾವಲಂಬಿಯಾಗೋಕೆ ದೇಶವು ಅನೇಕ ಪ್ರಯತ್ನಗಳನ್ನು ನಡೆಸಿದೆ. ಇದರ ಪರಿಣಾಮವಾಗಿ ಕಳೆದ ಆರು ದಶಕಗಳಿಂದಲೂ ಭಾರತದಲ್ಲಿ ರಸಗೊಬ್ಬರ ಉತ್ಪಾದನೆಯು ಏರಿಕೆಯಾಗುತ್ತಲೇ ಇದೆ.

1970-71ರ ಸಮಯದಲ್ಲಿ ಭಾರತವು 830 ಮೆಟ್ರಿಕ್‌ ಟನ್‌ ಗಳಷ್ಟು ಸಾರಜನಕ (N) ವನ್ನು ಉತ್ಪಾದಿಸಿತ್ತು ಹಾಗೆಯೇ 229 ಮೆಟ್ರಿಕ್ ಟನ್‌ ಗಳಷ್ಟು ಫಾಸ್ಫೇಟಿಕ್‌ ಅನ್ನು ಉತ್ಪಾದಿಸಿತ್ತು. ಭಾರತವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಈ N,P,K ರಸಗೊಬ್ಬರಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಅಷ್ಟೊಂದು ಪ್ರಮಾಣದ ರಸಗೊಬ್ಬರ ನಮ್ಮಲ್ಲಿ ಲಭ್ಯವಿರಲಿಲ್ಲ. ಹಾಗಾಗಿ ದೇಶೀಯವಾಗಿ ರಸಗೊಬ್ಬರ ಉತ್ಪಾದನೆಗೆ ಒತ್ತು ನೀಡಲಾಯಿತು.

ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡ ಪರಿಣಾಮ ಇಂದು ರಸಗೊಬ್ಬರ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಲಾಗಿದೆ. 2020-21ರಲ್ಲಿ 13,715 ಮೆಟ್ರಿಕ್‌ ಟನ್‌ ಗಳಷ್ಟು ಸಾರಜನಕ (N) ಹಾಗೆಯೇ 4,739 ಮೆಟ್ರಿಕ್ ಟನ್‌ ಗಳಷ್ಟು ಫಾಸ್ಫೇಟಿಕ್‌ ಅನ್ನು ಉತ್ಪಾದಿಸಲಾಗಿದೆ. ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ, ಒಂದು ರಾಷ್ಟ್ರ ಒಂದು ರಸಗೊಬ್ಬರ ಹೀಗೆ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಕೈಗೊಂಡಿದೆ. ಇದಲ್ಲದೇ ವಾಣಿಜ್ಯ ಉದ್ದೇಶಕ್ಕಾಗಿ ನ್ಯಾನೋ ಯೂರಿಯಾ ಉತ್ಪಾದನೆಯನ್ನು ಪ್ರಾರಂಭಿಸಿದ ಮೊದಲ ದೇಶ ಭಾರತವೆಂದೆನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!