ಹೊಸದಿಗಂತ ,ಮೈಸೂರು;
ಸಾಲದ ಹಣ ಕೇಳಲು ಮನೆಗೆ ಬಂದ ಅಣ್ಣನ ಮಗನನ್ನ ಆತನ ಚಿಕ್ಕಪ್ಪ ಹಾಗೂ ಕುಟುಂಬಸ್ಥರು ನೀರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಬೆಳವಾಡಿಯ ಪ್ರಭಾಕರ್ ಎಂಬುವರನ್ನ ಕೊಲೆಗೆ ಯತ್ನಿಸಿದ ಆರೋಪದಡಿ ಚಿಕ್ಕಪ್ಪ ಶ್ರೀನಿವಾಸ,ಪತ್ನಿ ಗೀತಾ,ಮಕ್ಕಳಾದ ಸಂಜು,ರAಜು ಹಾಗೂ ಗೀತಾ ತಂದೆ ಕೃಷ್ಣಪ್ಪ ಎಂಬುವರ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪ ಪ್ರಕರಣ ದಾಖಲಾಗಿದೆ.
ಪ್ರಭಾಕರ್ ತಮ್ಮ ಚಿಕ್ಕಪ್ಪ ಶ್ರೀನಿವಾಸ್ಗೆ ೧೬ ಲಕ್ಷ ಸಾಲ ನೀಡಿದ್ದಾರು. ಸಾಲ ವಾಪಸಾತಿಗಾಗಿ ೧೩ ಲಕ್ಷದ ಚೆಕ್ನ್ನು ಶ್ರೀನಿವಾಸ್ ನೀಡಿದ್ದರು.ನಗದೀಕರಿಸಲು ಬ್ಯಾಂಕ್ ಗೆ ಚೆಕ್ನ್ನು ಹಾಜರುಪಡಿಸಿದಾಗ, ಖಾತೆಯಲ್ಲಿ ಹಣವಿಲ್ಲದ ಕಾರಣ ಬೌನ್ಸ್ ಆಗಿದೆ.ಈ ಬಗ್ಗೆ ಶ್ರೀನಿವಾಸ್ರಿಗೆ ಪ್ರಭಾಕರ್ ಫೋನ್ ಮಾಡಿದಾಗ ಮನೆಗೆ ಬರುವಂತೆ ತಿಳಿಸಿದ್ದಾರೆ.ಮನೆಗೆ ಬಂದ ಪ್ರಭಾಕರ್ ಗೆ ಹಣ ನೀಡುವುದಿಲ್ಲವೆಂದು ಹೇಳಿದ್ದಾರೆ.
ಇದೇ ವೇಳೆ ಪ್ರಭಾಕರ್ ಕುಡಿಯಲು ನೀರು ಕೇಳಿದ್ದಾರೆ.ಗೀತಾ ಅಡುಗೆ ಮನೆಯಿಂದ ನೀರು ತಂದು ಕೊಟ್ಟಿದ್ದಾರೆ.ನೀರು ಕುಡಿಯುತ್ತಿದ್ದಂತೆಯೇ ಪ್ರಭಾಕರ್ ಗೆ ತಲೆ ಸುತ್ತಿದ್ದಂತಾಗಿದೆ.ಈ ಸಮಯದಲ್ಲಿ ಶ್ರೀನಿವಾಸ್,ಸಂಜು,ರAಜು ಹಾಗೂ ಕೃಷ್ಣಪ್ಪ ರವರು ಹಲ್ಲೆ ನಡೆಸಿದ್ದಾರೆ.
ಐವರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಮನೆಯಿಂದ ಹೊರಬಂದ ಪ್ರಭಾಕರ್ ಸ್ವಲ್ಪದೂರ ತೆರಳಿದ ನಂತರ ಪ್ರಜ್ಞೆತಪ್ಪಿ ಬಿದ್ದಿದ್ದಾರೆ.ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಾದ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಬಳಿಕ ವಿಜಯನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ರೀನಿವಾಸ್,ಗೀತಾ,ಸಂಜು,ರAಜು,ಕೃಷ್ಣಪ್ಪ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.