ಶೌಚಾಲಯದ ಗೋಡೆಗೆ ಕನ್ನ ಹಾಕಿ ಬ್ಯಾಂಕ್ ದರೋಡೆಗೆ ಯತ್ನ

ಹೊಸದಿಗಂತ ವರದಿ, ಮೈಸೂರು:

ಖದೀಮರು ಬ್ಯಾಂಕ್‌ವೊoದರ ಶೌಚಾಲಯದ ಗೋಡೆಗೆ ಕನ್ನ ಹಾಕಿ ದರೋಡೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕು ದೊಡ್ಡೇಬಾಗಿಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕ್ ನ ಶೌಚಾಲಯದ ಗೋಡೆಗೆ ಕನ್ನ ಹಾಕಿ ಒಳ ಪ್ರವೇಶಿಸಿರುವ ಖದೀಮರು ಸಿಸಿ ಕ್ಯಾಮರಾ ಹಾನಿಗೊಳಿಸಿ ಲಾಕರ್ ತೆರೆಯುವ ಯತ್ನ ನಡೆಸಿ ವಿಫಲರಾಗಿ ಬರಿಗೈಲಿ ವಾಪಾಸ್ ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃತ್ಯ ನಡೆದ ಬ್ಯಾಂಕ್ ಗೆ ಶ್ವಾನ ದಳ ಹಾಗೂ ಬೆರಳುಮುದ್ರೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬ್ಯಾಂಕ್ ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ. ಟಿ.ನರಸೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!