ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿ ಸುರಂಗ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ 41 ಕಾರ್ಮಿಕರನ್ನು ಹೊತ್ತು ಐಎಎಫ್ನ ಚಿನೂಕ್ ಹೆಲಿಕಾಪ್ಟರ್ ರಿಷಿಕೇಶಕ್ಕೆ ಹಾರಿದೆ.
ಕಾರ್ಮಿಕರ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಚಿನ್ಯಾಲಿಸೌರ್ನಿಂದ ರಿಷಿಕೇಶದ ಏಮ್ಸ್ನತ್ತ ಹೆಲಿಕಾಪ್ಟರ್ ಹೊರಟಿದೆ. ನಿನ್ನೆ ರಾತ್ರಿ ಸುರಂಗದಿಂದ ರಕ್ಷಿಸಿದ ಬಳಿಕ ಎಲ್ಲಾ ಕಾರ್ಮಿಕರನ್ನು ಚಿನ್ಯಾಲಿಸೌರ್ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
18 ವೈದ್ಯರ ತಂಡ ಕಳೆದ ರಾತ್ರಿಯಿಂದ ಕಾರ್ಮಿಕರ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿದ್ದರು. ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ರಿಷಿಕೇಶಕ್ಕೆ ಕಳಿಸಲಾಗಿದೆ. ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ವೀಕ್ಷಣೆಯಲ್ಲಿರಿಸುವುದು ಒಳಿತು ಎಂದು ಡಾ.ಬಿಮ್ಲೇಶ್ ಜೋಶಿ ಹೇಳಿದರು.