ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಶೃಂಗಸಭೆಯನ್ನು ಸಿಎಂ ಸಿದ್ದರಾಮಯಯ ಉದ್ಘಾಟಿಸಿದ್ದಾರೆ.
ಕೇಂದ್ರ ಸರ್ಕಾರಕ್ಕಿಂತಲೂ ಮುನ್ನ ನಮ್ಮ ಕರ್ನಾಟಕದಲ್ಲಿ ಸ್ಟಾರ್ಟಪ್ ನೀತಿಯನ್ನು ಆರಂಭಿಸಲಾಗಿತ್ತು ಎಂದು ಹೇಳಿದ್ದಾರೆ. 2015ರಲ್ಲೇ ದೂರದೃಷ್ಟಿಯ ಹೆಜ್ಜೆಯನ್ನು ನಮ್ಮ ಸರ್ಕಾರ ಇಟ್ಟಿದ್ದು, ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಮುಂಚೂಣಿಗೆ ಕೊಂಡೊಯ್ದಿದೆ. ಇದೇ ರೀತಿ ಹೆಜ್ಜೆಗಳನ್ನು ಮುಂದೆಯೂ ಇಡುತ್ತೇವೆ ಎಂದಿದ್ದಾರೆ.
ಇಂದಿನಿಂದ ಬೆಂಗಳೂರು ಟೆಕ್ ಶೃಂಗಸಭೆ ಆರಂಭವಾಗಿದ್ದು, 30ಕ್ಕೂ ಹೆಚ್ಚು ದೇಶಗಳ ನಾಯಕರು, ಸ್ಟಾರ್ಟಪ್ಗಳು, ಹೂಡಿಕೆದಾರರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.