ದಿಗಂತ ವರದಿ ವಿಜಯಪುರ:
ಗುಮ್ಮಟ ನಗರಿಯ ಬಸವನಾಡಲ್ಲಿ ಶೋಕಸಾಗರ ತುಂಬಿದ್ದು, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ದರುಶನಕ್ಕೆ ಲಕ್ಷೋಪ ಲಕ್ಷವಾಗಿ ಭಕ್ತ ಸಾಗರ ಹರಿದು ಬರುತ್ತಲೇ ಇದೆ.
ನಗರದ ಸೈನಿಕ ಶಾಲೆ ಆವರಣದಲ್ಲಿ ಲಕ್ಷ ಲಕ್ಷ ಜನರಿಂದ ಸಿದ್ದೇಶ್ವರ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲಾಗುತ್ತಿದೆ. ಅಂತೆಯೇ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯಕ್ತಿಯೊಬ್ಬರು ವೃದ್ಧೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ವಿಜಯಪುರದ ನಾಗಠಾಣ ಗ್ರಾಮದ 85 ವರ್ಷದ ವೃದ್ಧೆಯೊಬ್ಬರು ಓಂಶಾಂತಿ, ಶ್ರೀಗಳ ಅಂತಿಮ ದರ್ಶನ ಪಡೆಯಲು ಪರದಾಟ ನಡೆಸುವಂತಾಯಿತು. ಬಬಲೇಶ್ವರ ಗ್ರಾಮದ ಶಿವಾನಂದ ಅಜ್ಜಿಯ ಪರದಾಟ ನೋಡಿ ಭುಜದ ಮೇಲೆ ಹೊತ್ತು ತರಲಾಗಿದೆ.