ಸಚಿವ ಆನಂದ ಸಿಂಗ್ ಡಿ.ಕೆ ಶಿವಕುಮಾರ್ ಭೇಟಿ ತಪ್ಪೇನಿಲ್ಲ :ಸಚಿವ ಸುನೀಲ್ ಕುಮಾರ್

ದಿಗಂತ ವರದಿ ರಾಮನಗರ :

ರಾಜಕೀಯದಲ್ಲಿ ಒಬ್ಬರು ಇನ್ನೊಬ್ಬರನ್ನು ಭೇಟಿ ಮಾಡಿದ ಮಾತ್ರಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಆನಂದ ಸಿಂಗ್ ಭೇಟಿ ಕುರಿತು ಸೋಲೂರಿನಲ್ಲಿ ಅವರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.
ಬಿಜೆಪಿಯಲ್ಲಿ ಮೂಲ ಪಕ್ಷದವರು ಹಾಗೂ ವಲಸಿಗರು ಎಂಬ ಬೇಧ ಇಲ್ಲ. ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ನಮ್ಮವರೇ. ಎಲ್ಲರೂ ಒಟ್ಟಾಗಿಯೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ಕಾಂಗ್ರೆಸ್ ನವರಿಗೆ ಅಭದ್ರತೆ ಕಾಡುತ್ತಿದ್ದು, ಬೇರೆಯವರ ಬೆಂಬಲ ಬೇಕು ಎನಿಸಿರಬಹುದು. ನಮಗೆ ಆ ರೀತಿ ಅಭದ್ರತೆ ಇಲ್ಲ.
ಸಿದ್ದರಾಮಯ್ಯರಿಗೆ ಡಿ.ಕೆ. ಶಿವಕುಮಾರ್ , ಪರಮೇಶ್ವರ್ ಇಲ್ಲವೇ ಮತ್ಯಾರೋ ತಮ್ಮ ಸ್ಥಾನ ಹಿಡಿಯಬಹುದು ಎಂಬ ಅಭದ್ರತೆ ಕಾಡುತ್ತಿದೆ. ಹೀಗಾಗಿ ಮತ್ಯಾರೋ ತಮ್ಮ ಬೆಂಬಲಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ. ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಎಲ್ಲರೂ ಒಟ್ಟಾರೆ ಚುನಾವಣೆ ಎದುರಿಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!