ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ ಎದುರಾಗಿದೆ, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬಳಿ ಕಾರ್ ಮೇಲೆ ಮೆಟ್ರೋದ ಕಬ್ಬಿಣದ ತುಂಡು ಬಿದ್ದಿದ್ದು,ಕೂದಲೆಳೆ ಅಂತರದಲ್ಲಿ ಕಾರ್ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಲಿಸುತ್ತಿದ್ದ ಕಾರ್ ಮೇಲೆ ಕಬ್ಬಿಣದ ತುಂಡುಗಳು ಬಿದ್ದಿದ್ದು, ಕಾರ್ ಬಾನೆಟ್ ಹಾಗೂ ಗ್ಲಾಸ್ ಪುಡಿ ಪುಡಿಯಾಗಿದೆ, ಅವಸರದಲ್ಲಿ ಬೇರೆ ಅವಗಢವೂ ಸಂಭವಿಸುವ ಸಾಧ್ಯತೆ ಇತ್ತು.
ಕಾರ್ ಮಾಲೀಕ ರಿತೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಮಗೆ ನಷ್ಟ ತುಂಬಿಕೊಡಬೇಕು, ಹಾಗೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ. ಕಳೆದ ತಿಂಗಳಷ್ಟೇ ಮೆಟ್ರೋ ಪಿಲ್ಲರ್ ಬಿದ್ದು, ತಾಯಿ ಮಗು ದುರಂತ ಅಂತ್ಯ ಕಂಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಘಟನೆ ಸಂಭವಿಸಿದೆ.