ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನಲ್ಲಿ ರಾಮಾಯಣ ಆಧರಿತ ಇನ್ನೊಂದು ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡ್ರೆ ಇವರ ಧರ್ಮಪತ್ನಿ ಆಲಿಯಾ ಭಟ್ ಸೀತಾಮಾತೆ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇನ್ನು ರಾವಣನ ಪಾತ್ರಕ್ಕಾಗಿ ಚಿತ್ರತಂಡ ಸ್ಯಾಂಡಲ್ವುಡ್ ಕದ ತಟ್ಟಿದ್ದು, ರಾಕಿಂಗ್ ಸ್ಟಾರ್ ಯಶ್ರನ್ನು ರಾವಣನ ಪಾತ್ರಕ್ಕೆ ಅಪ್ರೋಚ್ ಮಾಡಲಾಗಿದೆಯಂತೆ.
ನಿರ್ದೇಶಕ ನಿತೇಶ್ ತಿವಾರಿ ಈ ಸಿನಿಮಾ ಮಾಡಲಿದ್ದು, ಈಗಾಗಲೇ ಯಶ್ ಜೊತೆ ಮಾತುಕತೆ ನಡೆದಿದೆ. ಆದರೆ ಇನ್ನೂ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಯಶ್ ಈ ಪಾತ್ರಕ್ಕೆ ಒಕೆ ಮಾಡಿದ್ದಾರಾ ಇಲ್ಲವಾ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು.