ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಾಲಯಗಳ ಮೇಲೆ ಭಾರತ ವಿರೋಧಿಬರಹಗಳನ್ನು ಕೆತ್ತನೆ ಮಾಡಿ ವಿರೂಪಗೊಳಿಸಲಾಗಿದೆ. ಬ್ರಾಂಪ್ಟನ್ನ ಜನಪ್ರಿಯ ದೇವಾಲಯದ ಮೇಲೆ ಹಿಂದೂ ವಿರೋಧಿ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ.
ಬ್ರಾಂಪ್ಟನ್ನ ಗೌರಿ ಶಂಕರ ದೇವಸ್ಥಾನದಲ್ಲಿ ನಡೆದ ಘಟನೆಯನ್ನು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಖಂಡಿಸಿದ್ದಾರೆ. ಇದು ಭಾರತೀಯ ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಈ ರೀತಿ ಘಟನೆ ನಡೆದಿರುವುದು ಇದೇ ಮೊದಲಲ್ಲ, ಕಳೆದ ಜುಲೈನಿಂದ ನಡೆದ ಮೂರನೇ ಪ್ರಕರಣ ಇದಾಗಿದೆ. ಕೆನಡಾದಲ್ಲಿರುವ ಹಿಂದೂ ಸಮುದಾಯ ಈ ದೇವಸ್ಥಾನಕ್ಕೆ ವಿಶೇಷ ಗೌರವ ಸಲ್ಲಿಸುತ್ತಾರೆ. ಈ ಘಟನೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ.
ಈ ಬಗ್ಗೆ ಹಿಂದೂಗಳು ಕೆನಡಾದ ಆಡಳಿತಕ್ಕೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಪರಂಪರೆಯ ಪ್ರತೀಕವಾಗಿರುವ ದೇವಾಲಯಗಳ ಗೋಡೆ ಮೇಲೆ ಈ ರೀತಿ ದ್ವೇಶ ಬರಹ ಅನುಚಿತ ಎಂದಿದ್ದಾರೆ.