ಗಣೇಶ ಹಬ್ಬದ ಭಜನೆ ಮಾಡುತ್ತಲೇ ಕಲಾವಿದನ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗಣೇಶ ಚತುರ್ಥಿಯ ಹಿನ್ನಲೆಯಲ್ಲಿ ದೇಶದಾಧ್ಯಂತ ಸಂಭ್ರಮದ ಕಾರ್ಯಕ್ರಮಗಳು ಜರುಗುತ್ತವೆ. ಒಂದೆಡೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ನೋವಿನ ಘಟನೆ ನಡೆದಿದ್ದು ಗಣೇಶೋತ್ಸವದ ಆಚರಣೆಯ ವೇಳೆ ಭಜನೆಯ ಮಾಡುತ್ತಲೇ ಕಲಾವಿದರೊಬ್ಬರು ಸಾವನ್ನಪ್ಪಿದ್ದಾರೆ.

ಹನುಮಂತನ ವೇಷಭೂಷಣ ಧರಿಸಿ ಉತ್ತರ ಪ್ರದೇಶದ ಮೈನ್‌ ಪುರಿಯಲ್ಲಿ ನೃತ್ಯ ಪ್ರದರ್ಶನ ಮಾಡುತ್ತಿದ್ದ ವೇಳೆ ರವಿ ಶರ್ಮಾ ಎಂದು ಗುರುತಿಸಲಾದ ಕಲಾವಿದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.ರವಿ ಶರ್ಮಾ ಅವರು ಮಣಿಪುರದ ಕೊತ್ವಾಲಿ ಪ್ರದೇಶದ ಶಿವ ದೇವಾಲಯದಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ಕರೆದ ಭಜನಾ ತಂಡದ ಭಾಗವಾಗಿದ್ದರು.

ಕುಸಿದು ಬಿದ್ದ ಅವರನ್ನು ಮೈನ್‌ಪುರಿಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮರಣ ಹೊಂದಿದ್ದರು. ಘಟನೆಯ ವಿಡಿಯೋ ಈಗ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!