ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಆನ್ಲೈನ್ ಫ್ರಾಡ್ಗಳ ಸಂಖ್ಯೆ ಹೆಚ್ಚಾಗಿದ್ದು, ಮೈಸೂರಿನಲ್ಲಿ ಕೆವೈಸಿ ಅಪ್ಡೇಟ್ಗೆಂದು ವ್ಯಕ್ತಿಯೊಬ್ಬರು 1.45 ಲಕ್ಷ ರೂ. ಮೋಸ ಹೋಗಿದ್ದಾರೆ.
ಹನುಮಂತನಗರದ ಹಾರೂನ್ ರಷೀದ್ ಖಾನ್(79)ಗೆ ಕೆವೈಸಿ ಅಪ್ಡೇಟ್ ಇದೆ ಎಂದು ಹೇಳಿ ವಂಚನೆ ಮಾಡಲಾಗಿದೆ. ಜೀವನವಿಡೀ ಕೂಡಿಟ್ಟ ಹಣ ಏಕಾಏಕಿ ಕಳೆದುಕೊಂಡಿದ್ದಕ್ಕಾಗಿ ವೃದ್ಧನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಹಣ ಕಳೆದುಕೊಂಡ ನಂತರ ಮೈಸೂರು ಸೈಬರ್ ಠಾಣೆಯಲ್ಲಿ ರಷೀದ್ ದೂರು ದಾಖಲಿಸಿದ್ದರು.