ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ತಾಜ್ ಹೊಟೇಲ್ನ್ನು ಇಬ್ಬರು ಪಾಕಿಸ್ತಾನಿಗಳು ಸ್ಫೋಟಿಸಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ.
ಪಾಕ್ನ ಇಬ್ಬರು ಸಮುದ್ರ ಮಾರ್ಗ ಮೂಲಕ ಭಾರತದ ಭೂ ಪ್ರದೇಶವನ್ನು ಪ್ರವೇಶಿಸ್ತಾರೆ. ಸುಪ್ರಸಿದ್ಧ ತಾಜ್ ಹೊಟೇಲ್ನ್ನು ಬ್ಲಾಸ್ಟ್ ಮಾಡಲಿದ್ದಾರೆ ಎಂದು ಕರೆ ಮಾಡಿ ಹೇಳಿದ್ದಾರೆ.
ಕರೆ ಮಾಡಿದಾತ ನನ್ನ ಹೆಸರು ಮುಖೇಶ್ ಸಿಂಗ್ ಎಂದು ಹೇಳಿದ್ದಾನೆ. ಆದರೆ ಆತನ ನಿಜವಾದ ಹೆಸರು ಜಗದಂಬ ಪ್ರಸಾದ್ ಸಿಂಗ್, ಈತ ಉತ್ತರ ಪ್ರದೇಶದ ಗೂಂಡಾ ಮೂಲದ ವ್ಯಕ್ತಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಹಿಂದೆಯೂ ಹೊಟೇಲ್ ಬ್ಲಾಸ್ಟ್ ಬಗ್ಗೆ ಸಾಕಷ್ಟು ಕರೆಗಳು ಬಂದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.