ದೇಶದ ಜನರ ಮನಗೆದ್ದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ಮಾನವೀಯ ಕಳಕಳಿ ಹಾಗೂ ಸರಳತೆಯ ಗುಣದಿಂದ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೆಂಬ ಅಹಂ ತೋರಿಸದೆ. ತನಗಾಗಿ ಕಾದಿದ್ದ 90ವರ್ಷದ ವೃದ್ದೆಯ ಬಳಿ ಖುದ್ದಾಗಿ ಬಂದು ಅವರ ಕಷ್ಟವನ್ನು ಆಲಿಸಿದ್ದಾರೆ.

ಶುಕ್ರವಾರ ಕಾಜಿರಂಗಕ್ಕೆ ಬಂದಿದ್ದ ಸಿಎಂ ಅವರನ್ನು ಭೇಟಿ ಮಾಡಲು, ಸುಮಾರು 60ಕಿಮೀ ದೂರದಿಂದ ಬಂದಿದ್ದ ವೃದ್ಧೆಗೆ ನಿರಾಸೆ ಮಾಡದೆ, ಅವರ ಅಹವಾಲನ್ನು ಸ್ವೀಕರಿಸಿದ್ದಾರೆ. ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಮಗನ ಕೆಲಸವನ್ನು ಖಾಯಂ ಗೊಳಿಸುವುದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ವೃದ್ಧೆಗೆ ಸಿಎಂ ಭರವಸೆ ನೀಡಿದ್ರು.

ವೃದ್ಧೆಯ ಬಳಿ ಕುಳಿತುಕೊಂಡು ಆತ್ಮೀಯವಾಗಿ ಮಾತನಾಡಿ, ಅವರ ಕಷ್ಟ-ಸುಖಗಳನ್ನು ಆಲಿಸಿರುವ ವಿಡಿಯೋವೊಂದು ವೈರಲ್‌ ಆಗಿದೆ. ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಪ್ರಜೆಗಳ ಕುಂದು ಕೊರತೆಗಳನ್ನು ಆಲಿಸುವಲ್ಲಿ ಹಿಮಂತ ಬಿಸ್ವಾ ಶರ್ಮಾ ಇತರರಿಗೆ ಮಾದರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!