ಮೊದಲಿಗೆ ಕಣಿವೆಯಲ್ಲಿ ಪೊಲೀಸರು ಏನೋ ತರಬೇತಿ ನಡೆಸುತ್ತಿದ್ದಾರೆ ಅಂದುಕೊಂಡೆವು: ಕರಾಳ ದೃಶ್ಯ ವಿವರಿಸಿದ ಮಂಜುನಾಥ್ ಪತ್ನಿ

ಹೊಸದಿಗಂತ ಡಿಜಿಟಲ್, ಶಿವಮೊಗ್ಗ:

ಜಮ್ಮು ಸಮೀಪದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಪೈಕಿ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ ರಾವ್ ಕೂಡಾ ಸೇರಿದ್ದು, ಅಲ್ಲಿನ ಭೀಕರ ಘಟನಾವಳಿಗಳ ಬಗ್ಗೆ ಅವರ ಪತ್ನಿ, ಮಾಮ್ಕೋಸ್ ಬೀರೂರು ಶಾಖೆಯಲ್ಲಿ ವ್ಯವಸ್ಥಾಪಕಿ ಆಗಿರು ಪಲ್ಲವಿ ಅವರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾವು ಏ.19 ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಇದು ಗುಡ್ಡಗಾಡು ಪ್ರದೇಶವಾದ್ದರಿಂದ, ಕಣಿವೆ ಮೂಲಕ ಹಾದು ಹೋಗಲು ಕುದುರೆಗಳನ್ನು ಬಾಡಿಗೆಗೆ ಪಡೆಯಬೇಕಾಯಿತು. ಇಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಮಂಗಳವಾರ ಬೆಳಿಗ್ಗೆ ಮಗನಿಗೆ ತಿಂಡಿ ತಿನ್ನಲು ಆಸೆ ಇತ್ತು. ಹಾಗಾಗಿ ಪತಿ ಅದನ್ನು ತರಲು ಅಂಗಡಿಗೆ ಹೋಗಿದ್ದರು… ಇದೇ ವೇಳೆ ನಮಗೆ ಗುಂಡಿನ ಶಬ್ದ ಕೇಳಿಸಿತು. ಮೊದಲಿಗೆ ಕಣಿವೆಯಲ್ಲಿ ಪೊಲೀಸರು ಏನೋ ತರಬೇತಿ ನಡೆಸುತ್ತಿದ್ದಾರೆ ಅಂದುಕೊಂಡೆವು. ಆದರೆ ಇದು ಭಯೋತ್ಪಾದಕರ ದಾಳಿ ಎಂದು ನಂತರ ತಿಳಿಯಿತು. ಸ್ಥಳಕ್ಕೆ ಧಾವಿಸಿ ಬಂದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಉಳಿದ ಪ್ರವಾಸಿಗರು ಭಯದಲ್ಲಿ ಕಿರುಚಲಾರಂಭಿಸಿದ್ದರು. ನಾವೀಗ ನಾನು ಲ್ಟಾಮ್‌ನಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

ನಾನು ಮತ್ತು ಮಗನ ಮೇಲೂ ಗುಂಡು ಹಾರಿಸಿ ಎಂದು ಉಗ್ರಗಾಮಿಗಳಿಗೆ ಆಗ್ರಹಿಸಿದೆ. ಅವರು ಮೋದಿ ಜಿ ಕೋ ಬತಾವೋ (ಮೋದಿ ಜಿಗೆ ಹಾಗೆ ಮಾಡಲು ಹೇಳು) ಎಂದು ಹೇಳಿದರು. ನಾನು ಇನ್ನೂ ಆಘಾತದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!