ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯ ಉಳ್ಳಾಲ ಸಮುದ್ರ ತೀರದ ೧.೫ ನಾಟಿಕಲ್ ಮೈಲ್ ದೂರದಲ್ಲಿ ಸರಕು ಸಾಗಾಟದ ಪ್ರಿನ್ಸೆಸ್ ಮಿರಾಲ್ ನೌಕೆ ಮುಳುಗಡೆಗೆ ಸಿದ್ಧತೆ ನಡೆಸಿದೆ. ಹಡಗಿನ ರಕ್ಷಣೆ ಅಸಾಧ್ಯವಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ಕೈಬಿಡಲಾಗಿದ್ದು, ಕಣ್ಣೆದುರೇ ಈ ದೈತ್ಯ ಶಾಶ್ವತವಾಗಿ ಕಡಲಾಳಕ್ಕೆ ಇಳಿಯಲಿದೆ. ಮುಳುಗಡೆ ಕಾಣುತ್ತಿದ್ದರೂ ಎಂ.ವಿ. ಪ್ರಿನ್ಸೆಸ್ ಮಿರಾಲ್ ಸುತ್ತ ಕಟ್ಟೆಚ್ಚರ ವಹಿಸಲಾಗಿದೆ. ಹಡಗಿನ ಸುತ್ತ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿದೆ. ಗಾಳಿ ತುಂಬಿದ ಬೂಮ್ಗಳನ್ನು ಬಳಸಿ ಬ್ಯಾರಿಕೇಡ್ ರಚಿಸಲಾಗಿದ್ದು, ಯಾವುದೇ ಅಪಾಯ ಸಂಭವಿಸದಂತೆ ಕೋಸ್ಟ್ ಗಾರ್ಡ್ ನೌಕೆ ಹದ್ದಿನ ಕಣ್ಣಿರಿಸಿದೆ.
ಜೂ.೨೧ರಂದು ಈ ಹಡಗು ಅಪಾಯಕ್ಕೆ ಸಿಲುಕಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಅದರಲ್ಲಿದ್ದ ೧೫ ಮಂದಿ ಸಿರಿಯಾ ಪ್ರಜೆಗಳನ್ನು ಕೋಸ್ಟ್ ಗಾರ್ಡ್ ತಂಡ ರಕ್ಷಣೆ ಮಾಡಿತ್ತು.