Friday, June 9, 2023

Latest Posts

ಅತಿಕ್ ಅಹ್ಮದ್ ಪ್ರಯಾಗ್‌ ರಾಜ್‌ ಜೈಲಿಗೆ:‌ ಬಿಗಿ ಭದ್ರತೆಯಲ್ಲಿ ಶಿವಪುರಿ ತಲುಪಿದ ಬೆಂಗಾವಲು ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಫಿಯಾ-ರಾಜಕಾರಣಿ ಅತಿಕ್ ಅಹ್ಮದ್‌ನನ್ನು ಗುಜರಾತ್‌ನ ಸಬರಮತಿ ಜೈಲಿನಿಂದ ಪ್ರಯಾಗ್‌ರಾಜ್ ಜೈಲಿಗೆ ಸಾಗಿಸಲು ಉತ್ತರ ಪ್ರದೇಶ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಇಂದು (ಸೋಮವಾರ) ಬೆಳಿಗ್ಗೆ ಬಿಗಿ ಭದ್ರತೆಯಲ್ಲಿ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯನ್ನು ಪ್ರವೇಶಿಸಿದರು.

2019 ರಿಂದ ಸಬರಮತಿ ಜೈಲಿನಲ್ಲಿದ್ದ ಅತೀಕ್, ಉಮೇಶ್ ಪಾಲ್ ಹಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಪ್ರಯಾಗ್‌ರಾಜ್‌ಗೆ ಕರೆತರಲಾಗುತ್ತಿದೆ. ಅಪಹರಣ ಪ್ರಕರಣದ ತೀರ್ಪಿಗಾಗಿ ಅತೀಕ್ ಅಹ್ಮದ್ ನನ್ನು ನಾಳೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಆರೋಪಿಗಳಲ್ಲಿ ಅತೀಕ್ ಅಹಮದ್ ಕೂಡ ಸೇರಿದ್ದು, ಅವರನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಅತೀಕ್ ಅಹ್ಮದ್ ಅವರನ್ನು ಅಹಮದಾಬಾದ್‌ನ ಸಬರಮತಿ ಜೈಲಿನಿಂದ ಉತ್ತರ ಪ್ರದೇಶ ಪೊಲೀಸರ 45 ಸದಸ್ಯರ ತಂಡ ಭಾನುವಾರ ಹೊರಕ್ಕೆ ಕರೆದೊಯ್ದಿದೆ ಮತ್ತು ಪ್ರಸ್ತುತ ಪ್ರಯಾಗ್‌ರಾಜ್ ಜೈಲಿಗೆ ಹೋಗುವ ಮಾರ್ಗದಲ್ಲಿದೆ.

ಬೆಂಗಾವಲು ಪಡೆ ಇಂದು ತಡರಾತ್ರಿ ರಾಜಸ್ಥಾನದ ಕೋಟಾ ತೂಗು ಸೇತುವೆಯನ್ನು ತಲುಪಿದೆ. ಕೋಟಾದ ತಾಥೇಡ್‌ನಲ್ಲಿ ಸ್ವಲ್ಪ ಹೊತ್ತು ಸ್ಥಗಿತಗೊಂಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!