ಮೆರೆದಾಡುತ್ತಿದ್ದ ಮರ್ಸಿಡಿಸ್ ಕಾರನ್ನು ಮೀರಿಸಿದ ಆಟೋರಿಕ್ಷಾ ಚಾಲಕ: ಸಿಎಂ ಶಿಂಧೆ ಈ ರೀತಿ ಹೇಳಿದ್ದು ಯಾರಿಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಟೋರಿಕ್ಷಾ ಓಡಿಸುತ್ತಿದ್ದವರು ಇಂದು ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ವ್ಯಂಗ್ಯವಾಡಿದ್ದ ಮಾಜಿ ಸಿಎಂ ಉದ್ಧವ್​ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಏಕನಾಥ್​ ಶಿಂಧೆ, ಮರ್ಸಿಡಿಸ್​ ಕಾರನ್ನು ಸಾಮಾನ್ಯ ಆಟೋರಿಕ್ಷಾ ಮೀರಿಸಿದೆ ಎಂದರು.
ಜೀವನೋಪಾಯಕ್ಕಾಗಿ ಈ ಹಿಂದೆ ಆಟೋ ರಿಕ್ಷಾ ಚಾಲಕನಾಗಿದ್ದೆ ಎಂಬ ಬಗ್ಗೆ ಹೆಮ್ಮೆ ಇದೆ. ಈಗ ಅದೇ ಆಟೋ ರಿಕ್ಷಾ ಚಾಲಕ ರಾಜ್ಯದ ಸಿಎಂ ಆಗಿದ್ದಾನೆ. ಭಾರಿ ಮೆರೆದಾಡುತ್ತಿದ್ದ ಮರ್ಸಿಡಿಸ್ ಕಾರನ್ನು ಇಂದು ನಾನು ಮೀರಿಸಿದ್ದಾನೆ ಎಂದು ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
ನಮ್ಮದು ಸಾಮಾನ್ಯ ಜನರ ಸರ್ಕಾರ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತದೆ. ಈ ಆಟೋ ರಿಕ್ಷಾ ಸರ್ಕಾರ ಬಡವರ ಪರವಾಗಿದೆ ಎಂಬುದನ್ನು ತೋರಿಸಿಕೊಡಲಾಗುವುದು ಎಂದು ಭರವಸೆ ಕೊಟ್ಟರು.
ಕಳೆದ ವಾರ ಠಾಕ್ರೆ ಬಂಡಾಯವೆದ್ದ ಶಿಂಧೆ, ಬಂಡಾಯವನ್ನು ಮುನ್ನಡೆಸುತ್ತಿದ್ದಾಗ ಕೆಲವು ಸೇನಾ ನಾಯಕರು “ಆಟೋ ರಿಕ್ಷಾ ಚಾಲಕ” ಎಂದು ನಿಂದಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!