Ayodhya | ಶ್ರದ್ಧೆ-ಭಕ್ತಿಯೊಂದಿಗೆ ಪಾಲ್ಗೊಳ್ಳಿ: ಭಕ್ತರಿಗೆ ದ್ವಾರಕಾ- ಶೃಂಗೇರಿ ಮಠದ ಶಂಕರಾಚಾರ್ಯರ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಜ.22ರಂದು ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠೆಯ ಅತ್ಯಪೂರ್ವ ಕಾರ್ಯಕ್ರಮದಲ್ಲಿ ಪ್ರತಿಯೋರ್ವ ಭಕ್ತರೂ ಶ್ರದ್ಧೆ-ಭಕ್ತಿಯೊಂದಿಗೆ ಪಾಲ್ಗೊಳ್ಳುವಂತೆ ಸನಾತನ ಹಿಂದು ಧರ್ಮದ ಮೇರು ಯತಿಗಳಾದ ದ್ವಾರಕಾ ಮತ್ತು ಶೃಂಗೇರಿ ಮಠದ ಶಂಕರಾಚಾರ್ಯರು ಭಕ್ತರಿಗೆ ಕರೆ ನೀಡಿದ್ದಾರೆ. ತನ್ಮೂಲಕ ಈ ಕಾರ್ಯಕ್ರಮದ ನೆಪದಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ನಿಂದೆಗೆ ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್ ಸಹಿತ ಸ್ಥಾಪಿತ ಹಿತಾಸಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಈ ವಿಚಾರವಾಗಿ ಉಭಯ ಶಂಕರಾಚಾರ್ಯರು ದೇಶಾದ್ಯಂತದ ಭಕ್ತರನ್ನು ಉದ್ದೇಶಿಸಿ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಎಲ್ಲಾ ನಾಲ್ಕೂ ಪೀಠಗಳ ಜಗದ್ಗುರುಗಳು ಶ್ರೀಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ವಿರೋಧಿಸಿದ್ದಾರೆಂದು ಸ್ಥಾಪಿತ ಹಿತಾಸಕ್ತಿಗಳು ಹಾಗೂ ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಮಾಹಿತಿಗಳು ಸತ್ಯಕ್ಕೆ ದೂರವೆಂದು ಸ್ಪಷ್ಟಪಡಿಸಿರುವ ಶೃಂಗೇರಿ, ದ್ವಾರಕಾ ಸಹಿತ ಇತರ ಪೀಠಗಳ ಯತಿಗಳು ಜ.22ರ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾಲ್ವರು ಶಂಕರಾಚಾರ್ಯರು ಕೂಡ ಅಯೋಧ್ಯೆಯಲ್ಲಿ ಶ್ರೀರಾಮ ಲಲಾನ ಪ್ರಾಣ ಪ್ರತಿಷ್ಠೆಯನ್ನು ವಿರೋಧಿಸಿದ್ದಾರೆಂದು ಕಾಂಗ್ರೆಸ್‌ನ ಕೆಲ ನಾಯಕರು ಗುಲ್ಲೆಬ್ಬಿಸಿದ್ದರು. ಆದರೆ ವಾಸ್ತವ ಇದಲ್ಲ, ಪುರಿ ಜ್ಯೋತಿರ್ಪೀಠ ಶಂಕರಾಚಾರ್ಯರ ಹೊರತು ಮಿಕ್ಕೆಲ್ಲಾ ಪೀಠಗಳ ಶಂಕರಾಚಾರ್ಯರು ಪ್ರಧಾನಿ ನಮೋ ಬಾಲರಾಮನಿಗೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಉದ್ಘಾಟಿಸುವುದನ್ನು ಹರ್ಷದಿಂದ ಸ್ವಾಗತಿಸಿದ್ದಾರೆ ಮತ್ತು ಈ ಅಪೂರ್ವ ಕಾರ್ಯಕ್ರಮದಲ್ಲಿ ತಪ್ಪದೆ ಪಾಲ್ಗೊಳ್ಳುವಂತೆ ದೇಶವಾಸಿಗಳೆಲ್ಲರನ್ನು ವಿನಂತಿಸಿದ್ದಾರೆ.ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ತಿಯಾಗಿಲ್ಲ. ರಾಜಕೀಯ ಕಾರಣಗಳಿಗೆ ಇದನ್ನು ಉದ್ಘಾಟಿಸಲಾಗುತ್ತಿದೆ ಎಂದು ಜ್ಯೋತಿರ್ಪೀಠ ಶಂಕರಾಚಾರ್ಯರು ಟೀಕಿಸಿದ್ದರು.

ಅಧಿಕೃತ ಪ್ರಕಟಣೆ ನೀಡಿಲ್ಲ
ಜನ್ಮಭೂಮಿ ಅಯೋಧ್ಯೆಗೆ ಸಂಬಂಧಿಸಿ ಗುಜರಾತಿನ ದ್ವಾರಕಾ ಪೀಠವಾಗಲಿ, ಶೃಂಗೇರಿ ಶಾರದಾ ಪೀಠ ಕೂಡ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.ಈ ವಿಚಾರದಲ್ಲಿ ಮಾಧ್ಯಮಗಳಲ್ಲಿನ ಪ್ರಕಟಣೆ ಹಾದಿ ತಪ್ಪಿಸುವಂತದ್ದು ಮತ್ತು ಉಭಯ ಪೀಠಗಳ ಜಗದ್ಗುರುಗಳ ಸಮ್ಮತಿ ಪಡೆಯದೆಯೇ ಇವನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ ಎಂಬ ಸ್ಪಷ್ಟನೆಯುಕ್ತ ಪತ್ರವನ್ನು ದ್ವಾರಕಾ ಪೀಠವು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

ರಾಮಜನ್ಮಭೂಮಿಯನ್ನು ಮರಳಿ ಪಡೆಯಲು, ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಹಾಗೂ ರಾಮಾಲಯ ಟ್ರಸ್ಟ್ ಮುಖೇನ ನಮ್ಮ ಗುರುಗಳು ತುಂಬು ಪರಿಶ್ರಮಿಸಿದ್ದಾರೆ. 500 ವರ್ಷಗಳ ಹೋರಾಟ ಬಳಿಕ ಇದೀಗ ಕೊನೆಗೂ ಶ್ರೀರಾಮಚಂದ್ರನ ಜನ್ಮಭೂಮಿಯಲ್ಲೇ ಶ್ರೀರಾಮನಿಗೆ ಭವ್ಯಮಂದಿರ ನಿರ್ಮಾಣವಾಗುತ್ತಿರುವುದು ಸನಾತನ ಧರ್ಮ ನಿಷ್ಠರಿಗೆ ಅತ್ಯಂತ ಸಂತಸದ ವಿಚಾರ. ಜ.22ರ ಕಾರ್ಯಕ್ರಮ ವೇದಗಳು ಮತ್ತು ಧಾರ್ಮಿಕ ವಿಧಿ ವಿಧಾನಗಳಿಗೆ ಅನುಗುಣವಾಗಿ ಸಂಪನ್ನಗೊಳ್ಳಲಿ ಎಂಬುದು ದ್ವಾರಕಾಶನಿಗೆ ನಮ್ಮ ಪ್ರಾರ್ಥನೆ ಎಂದು ಹೇಳಿಕೆಯಲ್ಲಿ ವಿಶದಪಡಿಸಲಾಗಿದೆ.ದ್ವಾರಕಾ ಶಂಕರಾಚಾರ್ಯರ ಆಪ್ತ ಕಾರ್ಯದರ್ಶಿ ಸುಬೋಧಾನಂದ ಮಹಾರಾಜ್ ಅವರು ಹೇಳಿಕೆಗೆ ಸಹಿ ಹಾಕಿದ್ದಾರೆ.

ಆಸ್ತಿಕರೆಲ್ಲರಿಗೆ ನೆಮ್ಮದಿ, ಖುಷಿಯ ವಿದ್ಯಮಾನ
ಐದು ಶತಮಾನಗಳ ಹೋರಾಟ ನಂತರ ಕೊನೆಗೂ, ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಪುಷ್ಯ ಶುಕ್ಲ ದ್ವಾದಶಿಯಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಪನ್ನಗೊಳ್ಳುತ್ತಿರುವುದು ಸತಾತನ ಧರ್ಮಾನುಷ್ಟಾನಿಗಳಿಗೆ ಸಂತೋಷದ ಸಂಗತಿ. ಆದರೆ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಇಂತಹ ಪುಣ್ಯಮಯ ಸನ್ನಿವೇಶವನ್ನೂ ಹಾಳುಗೆಡವಲು ಸಂಚು ನಡೆಸುತ್ತಿರುವುದು ತೀರಾ ಅಕ್ಷಮ್ಯ. ಧರ್ಮವಿರೋಧಿಗಳು www.dainikjagran.com ಹೆಸರನ್ನು ದುರ್ಬಳಸಿಕೊಂಡು, ಶೃಂಗೇರಿ ಶ್ರೀಗಳು ರಾಮಲಲಾನ ಪ್ರಾಣ ಪ್ರತಿಷ್ಠೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಅವರ ಫೋಟೋ ಸಮೇತ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಧರ್ಮ ವಿರೋಧಿಗಳ ಈ ಅಕೃತ್ಯವನ್ನು ಶೃಂಗೇರಿ ಮಠಾಶರು ಅತ್ಯುಗ್ರವಾಗಿ ಖಂಡಿಸಿದ್ದಾರೆ. ಇಂತಹ ಯಾವುದೇ ಸಂದೇಶ ಶೃಂಗೇರಿ ಮಠನೀಡಿಲ್ಲ.ಇದೊಂದು ಸುಳ್ಳು ಮಾಹಿತಿ.ಆಸ್ತಿಕರು ಇದಕ್ಕೆಬೆಲೆಗೊಡದೆ ಶೃಂಗೇರಿ ಮಠದ ಅಧಿಕೃತ ವೆಬ್‌ಸೈಟ್ ಮತ್ತು ಶೃಂಗೇರಿ ಶಾರದಾ ಪೀಠದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಪ್ರಕಟಣೆಯನ್ನು ಮಾತ್ರ ಪರಿಗಣಿಸಿ
ರಾಮಲಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಅಗತ್ಯವಾಗಿ ಪಾಲ್ಗೊಳ್ಳಬೇಕೆಂದು ಭಕ್ತರನ್ನು ಉದ್ದೇಶಿಸಿದ ಅಧಿಕೃತ ಪತ್ರದಲ್ಲಿ ವಿನಂತಿಸಿದ್ದಾರೆ.

ಉತ್ತರಾಖಂಡದ ಬದರಿಕಾಶ್ರಮ ಜ್ಯೋತಿರ್ಮಠದ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ , ಪುರಿ ಪೂರ್ವಾಮ್ನಾಯ ಗೋವರ್ಧನ ಮಠದ ಶ್ರೀ ನಿಶ್ಚಲಾನಂದ ಸರಸ್ವತಿ ಶ್ರೀಗಳು,ಶೃಂಗೇರಿ ಮಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ,ಪಶ್ಚಿಮಾನ್ನಾಯ ದ್ವಾರಕಾ ಶಾರದಾ ಪೀಠದ ಶ್ರೀ ಸದಾನಂದ ಸರಸ್ವತಿ ಸ್ವಾಮಿಗಳು ಶ್ರೀರಾಮ ಲಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸಿಗರು ಜಾಲತಾಣದಲ್ಲಿ ಅಪಪ್ರಚಾರ ಮಾಡಿದ್ದರು.

ರಾಮಲಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಪುರಿ ಜ್ಯೋತಿರ್ಮಠಾಶರು ಹೇಳಿದ್ದರು. ಆದರೆ ಶೃಂಗೇರಿ ಮತ್ತು ದ್ವಾರಕಾ ಮಠಾಶರು ಈ ತೆರ ವಿವೇಚನಾರಹಿತ ಹೇಳಿಕೆ ನೀಡಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತೇವೆ, ಭಕ್ತರೆಲ್ಲರೂ ಭಾಗಿಯಾಗುವಂತೆ ಕರೆ ನೀಡಿದವರು. ಆದರೆ ಕಾಂಗ್ರೆಸಿಗರು ಉದ್ದೇಶಪೂರ್ವಕ ಶೃಂಗೇರಿ, ದ್ವಾರಕಾ ಪೀಠಾಶರ ಹೆಸರನ್ನೂ ತಮ್ಮ ಪಟ್ಟಿಯಲ್ಲಿ ಸೇರಿಸಿರುವುದು ಕಾಂಗ್ರೆಸಿಗರು ಅಜ್ಞಾನದ ಪರಮಾವ. ಪ್ರಧಾನಿ ನಮೋ ಮಾಡುತ್ತಿರುವ ಸರ್ವ ಒಳಿತಿನ ಕಾರ್ಯಗಳ ವಿರುದ್ಧ ಮಿಥ್ಯಾರೋಪ ಹೊರಿಸುವುದು ಕಾಂಗ್ರೆಸಿಗರ ಮಾಮೂರಿ ಜಾಯಮಾನ ಎಂಬುವುದು ತನ್ಮೂಲಕ ಸ್ಪಷ್ಟ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!