ಅಯೋಧ್ಯಾ ಶ್ರೀರಾಮ ಮಂದಿರದ ಮುಖ್ಯದ್ವಾರ, ಸಿಂಹಾಸನಕ್ಕೆ ಚಿನ್ನದ ಲೇಪನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಮುಖ್ಯದ್ವಾರ ಹಾಗೂ ಗರ್ಭಗುಡಿಯ ಸಿಂಹಾಸನವನ್ನು ಚಿನ್ನದಿಂದ ಅಲಂಕರಿಸಲಾಗುತ್ತಿದೆ.

ಈಗಾಗಲೇ ಇದರ ನಿರ್ಮಾಣ ಹೊಣೆಯನ್ನು ದೆಹಲಿಯ ಆಭರಣ ತಯಾರಿಕಾ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ.
ರಾಮಲಲ್ಲಾನ ಸಿಂಹಾಸನಕ್ಕೆ ಚಿನ್ನ ಲೇಪಿಸುವ ಕಾರ್ಯ ಕೂಡಾ ಜ.15ರೊಳಗೆ ಪೂರ್ಣಗೊಳ್ಳಲಿದೆ. ಈ ನಡುವೆ ಜ.15ರೊಳಗೆ ದೇಗುಲದ ಗರಿಷ್ಠ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!