July 12, 2026
Sunday, July 12, 2026
spot_img

ಅಯ್ಯಪ್ಪನ ಆಭರಣಗಳ ಮೆರವಣಿಗೆ ಆರಂಭ, ನಾಲ್ಕು ದಿನಗಳ ನಂತರ ಶಬರಿಮಲೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಬರಿಮಲೆ ತೀರ್ಥಯಾತ್ರೆ ಹಾಗೂ ಮಕರವಿಳಕ್ಕು ಪೂಜೆ ಆರಂಭಗೊಂಡಿದ್ದು, ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಭೇಟಿ ನೀಡುತ್ತಿದ್ದಾರೆ. ಶಬರಿಮಲೆಯಲ್ಲಿ ಮಂಡಲ ಪೂಜೆಗಾಗಿ ರಾಜರ ಕಾಲದ ಆಭರಣಗಳು ಹೊತ್ತ ಔಪಚಾರಿಕ ಮೆರವಣಿಗೆ ಇಂದು ಪ್ರಾರಂಭಗೊಂಡಿದ್ದು, ಬೆಳಗ್ಗೆ 7 ಗಂಟೆಗೆ ಅರನ್ಮುಲಾದ ಪಾರ್ಥಸಾರಥಿ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಯಿತು.

ನಾಲ್ಕು ದಿನಗಳ ಪ್ರಯಾಣದ ನಂತರ, ದೀಪಾರಾಧನೆಗೆ ಮುಂಚಿತವಾಗಿ 26ರಂದು ಸಂಜೆ ಶಬರಿಮಲೆ ಸನ್ನಿಧಾನವನ್ನು ಈ ಮೆರವಣಿಗೆ ತಲುಪಲಿದೆ. ಇಂದು, ಬೆಳಗ್ಗೆ 5 ರಿಂದ ಬೆಳಗ್ಗೆ 7 ರವರೆಗೆ, ಅರಣಮುಲ ದೇವಸ್ಥಾನದ ಅಂಗಳದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಅಯ್ಯಪ್ಪ ದೇವರ ಆಭರಣಗಳನ್ನು ತೆರೆದಿಡಲಾಗಿತ್ತು. ಈ ಆಭರಣಗಳನ್ನು ತಿರುವಾಂಕೂರು ಮಹಾರಾಜರು ಮಂಡಲ ಪೂಜೆಗಾಗಿ ಅಯ್ಯಪ್ಪ ದೇವರಿಗೆ ಅರ್ಪಿಸಿದ್ದರು.

ಮಧ್ಯಾಹ್ನ 3 ಗಂಟೆಗೆ ಪಂಪಾದಿಂದ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಶರಂಕುತಿಗೆ ಆಗಮಿಸಲಿದೆ. ಅಲ್ಲಿಂದ ವಿಧಿವಿಧಾನಗಳ ಪ್ರಕಾರ ಮೆರವಣಿಗೆ ಗರ್ಭಗುಡಿಯ ಕಡೆಗೆ ಸಾಗುತ್ತದೆ. ಹದಿನೆಂಟನೇ ಮೆಟ್ಟಿಲು ಹತ್ತಿ ಸೋಪಾನಂ ತಲುಪಿದ ನಂತರ, ತಂತ್ರಿಗಳು ಆಭರಣಗಳ ಪೆಟ್ಟಿಗೆಯನ್ನು ಸ್ವೀಕರಿಸಿ ಅಯ್ಯಪ್ಪ ವಿಗ್ರಹದ ಬಳಿ ಇರಿಸುತ್ತಾರೆ. ಸಂಜೆ 6.30ಕ್ಕೆ ದೀಪಾರಾಧನೆ ನಡೆಯಲಿದೆ. ಡಿಸೆಂಬರ್ 27 ರಂದು ಮಧ್ಯಾಹ್ನ ಆಭರಣಗಳ ಪೆಟ್ಟಿಗೆಯನ್ನು ಗರ್ಭಗುಡಿಗೆ ಕೊಂಡೊಯ್ದ ನಂತರ, ಮುಖ್ಯ ಮಂಡಲ ಪೂಜೆಯನ್ನು ನಡೆಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !