ಅಜಾದಿ ಕಾ ಅಮೃತ ಮಹೋತ್ಸವ: ಪುಟಾಣಿಗಳ ಜೊತೆ ತಿರಂಗ ಹಾರಿಸಿ ಸಂಭ್ರಮಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮ ಮತ್ತಷ್ಟು ಹೆಚ್ಚಿಸಲು ಹರ್ ಘರ್ ತಿರಂಗಾ ಅಭಿಯಾನ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಮಕ್ಕಳ ಜೊತೆ ತಿರಂಗ ಹಾರಿಸಿ ಗಮನಸೆಳೆದಿದ್ದಾರೆ.

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ಭಾರತ ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಇದರಲ್ಲಿ ಹರ್ ಘರ್ ತಿರಂಗಾ ಅಭಿಯಾನ ಕೂಡ ಒಂದು. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಮಕ್ಕಳ ಜೊತೆ ತಿರಂಗ ಹಾರಿಸಿದ್ದಾರೆ.

ಮುದ್ದು ಮಕ್ಕಳಿಗೆ ಪ್ರಧಾನಿ ಮೋದಿ ತಮ್ಮ ಕೈಯಾರೆ ತಿರಂಗ ನೀಡಿದ್ದಾರೆ. ಬಳಿಕ ಮಕ್ಕಳ ಜೊತೆ ತಿರಂಗ ಹಾರಿಸಿದ್ದಾರೆ. ಪ್ರಧಾನಿ ಜೊತೆ ತಿರಂಗ ಹಾರಿಸುವ ಸಂಭ್ರಮದಲ್ಲಿ ಮಕ್ಕಳು ಅತೀವ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರತ್ ಮಾತಾಕಿ ಜೈ, ವಂದೇ ಮಾತಾರಂ ಘೋಷಣೆಗಳು ಮೊಳಗಿತ್ತು.

ಇದೇ ವೇಳೆ ಮಕ್ಕಳಿಗೆ ಪ್ರಶ್ನೆ ಕೇಳಿದ ಮೋದಿ, ದೇಶಕ್ಕೆ ಸ್ವಾತಂತ್ರ್ಯ ಯಾವಾಗ ಸಿಕ್ಕಿತ್ತು? ಸ್ವಾತಂತ್ರ್ಯ ದಿನಾಚರಣೆ ನಾವು ಏನು ಮಾಡುತ್ತೇವೆ ಸೇರಿದಂತೆ ಕೆಲ ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮಕ್ಕಳಲ್ಲಿ ಕೇಳಿದ್ದಾರೆ. ಮಕ್ಕಳು ಖುಷಿಪಟ್ಟಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ದೇಶವು ಯಾವ ರೀತಿ ದೇಶಪ್ರೇಮದ ಉತ್ಸಾಹ ಕಂಡಿತೋ, ಅದೇ ಉತ್ಸಾಹವನ್ನು ಇಂದು ದೇಶದ ಯುವಕರಲ್ಲಿ ಮೂಡಿಸಬೇಕು. ಈ ಮೂಲಕ ಈ ಉತ್ಸಾಹವು ದೇಶ ನಿರ್ಮಾಣದಲ್ಲಿ ಪರಿವರ್ತನೆ ಆಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಇತರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯದ ಅಮೃತೋತ್ಸವದ ಭಾವನಾತ್ಮಕ ಕಂಪು, ಈ ಆಂದೋಲನದ ತಿರುಳಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದರಿಂದ ದೇಶಪ್ರೇಮದ ಅಲೆ ದೇಶದಲ್ಲಿ ಏಳುತ್ತದೆ. ಈ ಮೂಲಕ ದೇಶ ನಿರ್ಮಾಣದಲ್ಲಿ ಇದು ಪರಿವರ್ತನೆಗೊಳ್ಳಬೇಕು. ಹೀಗೆ ದೇಶ ಪರಿವರ್ತನೆ ಮಾಡುವಲ್ಲಿ ಈ ಆಂದೋಲನವೊಂದು ಸುವರ್ಣಾವಕಾಶ’ ಎಂದು ಬಣ್ಣಿಸಿದರು.

ತ್ರಿವಣಧ್ವಜವು ಏಕತೆಯ ಪ್ರತೀಕ. ಇದರಿಂದ ದೇಶದಲ್ಲಿ ಧನಾತ್ಮಕತೆ ಹಾಗೂ ಸಮೃದ್ಧತೆ ಹೆಚ್ಚುತ್ತದೆ. ಯುವಕರ ಪಾಲಿಗೆ ಇದೊಂದು ಸಂಸ್ಕಾರ ಉತ್ಸವ. ಇಂದಿನ ಯುವಕರೇ ನಾಳಿನ ನಾಯಕರು ಎಂದಿದ್ದಾರೆ.

ಹೀಗಾಗಿ ಯುವಕರಲ್ಲಿ ಕರ್ತವ್ಯ ಪ್ರಜ್ಞೆ ಬೆಳೆಸಬೇಕು. ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆ ಕನಸುಗಳನ್ನು ನನಸು ಮಾಡಲು ಯುವಕರಲ್ಲಿ ಜವಾಬ್ದಾರಿ ಹಾಗೂ ಕರ್ತವ್ಯಪ್ರಜ್ಞೆ ಮೂಡಿಸಬೇಕು’ ಎಂದು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!