ಹೊಸದಿಗಂತ ವರದಿ ಬಾಗಲಕೋಟೆ:
1990ರ ಅಯೋಧ್ಯೆ ಶ್ರೀರಾಮ ಮಂದಿರ ಮುಕ್ತಿ ಹೋರಾಟ ದಲ್ಲಿ ಬಲಿದಾನಗೈದ ಶ್ರೀರಾಮ ಭಕ್ತ ಕಾರಸೇವಕರ ಸ್ಮರಣೆಗಾಗಿ ಪ್ರತಿವರ್ಷದಂತೆ ಈ ವರ್ಷವೂ ವಿಶ್ವ ಹಿಂದು ಪರಿಷದ್ ಬಜರಂಗದಳ ನಗರ ಘಟಕ ವತಿಯಿಂದ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರ ದಲ್ಲಿ ಕಾರ್ಯಕರ್ತ ರಿಂದ ರಕ್ತದಾನ ಶಿಬಿರ ನಡೆಯಿತು.
ಈ ಕಾರ್ಯಕ್ರಮ ದಲ್ಲಿ ವಿಶ್ವ ಹಿಂದು ಪರಿಷದ್ ಜಿಲ್ಲಾ ಉಪಾಧ್ಯಕ್ಷರಾದ ಗಂಗಾಧರ ಮುರನಾಳ, ಜಿಲ್ಲಾ ಕಾರ್ಯದರ್ಶಿ ಶಿವು ಮೇಲ್ನಾಡ,ಸಂಘದ ಪ್ರಮುಖರು ವಿಜಯ ಸುಲಾಖೆ, ಮನೋಜ್ ಕರೋಡಿವಾಲ, ರಮೇಶ ಬಂಡಿವಡ್ಡರ,ಮುತ್ತು ಹಲಗಲಿ,ಕೃಷ್ಣ ರಾಜೂರ, ಹಾಗೂ ರಕ್ತ ಭಂಡಾರದ ಪ್ರಮುಖ ಡಾ. ಶ್ರೀಶೈಲ ಹಟ್ಟಿ, ಡಾವಿಜಯಕುಮಾರ್, ಅಂಬಾಸಾ ಬಾಂಢಗೆ,ಬಸವರಾಜ ಮುದಗಲ್ಲ, ಸೂರಪುರಮಠ, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.