ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ: ಅಭಿನಂದನೆ ಸಲ್ಲಿಸಿದ ಪೂಜಾರ!

ಹೊಸದಿಗಂತ ವರದಿ,ಬೆಳಗಾವಿ:

ವಿಧಾನ ಪರಿಷತ್ ಸದಸ್ಯರಾಗಿ ಎಂಟು ಬಾರಿ ಹಾಗೂ ಮೇಲ್ಮನೆಗೆ ಮೂರು ಭಾರಿ ಸಭಾಪತಿಯಾಗಿ ಬಸವರಾಜ ಹೊರಟ್ಟಿಯವರು ದಾಖಲೆ ನಿರ್ಮಿಸಿದ್ಸಾರೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಪರಿಷತ್ ದಲ್ಲಿ ತಿಳಿಸಿದರು.
ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿಯವರು ಸಭಾಪತಿ ಸ್ಥಾನ ಅಲಂಕರಿಸಿದ ನಂತರ ಪರಿಷತ್ ದಲ್ಲಿ ಅಭಿನಂಧನೆ ಸಲ್ಲಿಸಿ ಅವರು ಮಾತನಾಡಿದರು.ಸಭಾಪತಿಯಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿಯವರು ಬಾಗಲಕೋಟೆ ಯವರಾಗಿದ್ದು ಸಂತಸ ತಂದಿದೆ.ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಗೆ ಪಕ್ಷಾತೀತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಬಾಗಲಕೋಟೆ ಯವರಾದ ರಾಷ್ಟ್ರಪತಿಯಾಗಿದ್ದ ಬಿ.ಡಿ.ಜತ್ತಿ ಅವರು ಉತ್ತಮ ಕೆಲಸ ಮಾಡಿ ಜಿಲ್ಲೆಗೆ ಹೆಸರು ವಾಸಿಯಾಗಿದ್ದರು. ಅವರ ಸಾಲಿನಲ್ಲಿ ಹೊರಟ್ಟಿಯವರು ನಿಂತಿದ್ದಾರೆ ಎಂದರು.
ಸತ್ಯಕ್ಕೆ ಸಹಕಾರಿ ಮೂರ್ತಿಯಾಗಿದ್ದು ತಮ್ಮ ವ್ಯಕ್ತಿತ್ವದಿಂದ ಎಂಟು ಭಾರಿ ಗೆದ್ದಿದ್ದಾರೆ. ವಾತ್ಸಲ್ಯ ಪ್ರೀತಿ‌ ಮಮತೆ ಯಿಂದ‌ ಶಿಕ್ಷಕರ ಸಮಸ್ಯೆ ಅರಿತು ಪರಿಹರಿಸಿದ್ದಾರೆ. ಅವರು ಇನ್ನಷ್ಡು ಸೇವೆ ಸಲ್ಲಿಸಲಿ ಎಂಬ ಆಶಯವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!