ಹೊಸದಿಗಂತ ವರದಿ, ಮುಂಡಗೋಡ:
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿ ತೀವ್ರ ಗಾಯ ಪಡಿಸಿದ ಘಟನೆ ತಾಲೂಕಿನ ಮರಗಡಿ ಗ್ರಾಮದ ಅರಣ್ಯದಂಚಿನಲ್ಲಿ ಜರುಗಿದೆ.
ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿಯನ್ನು ಪಕ್ಕಿರಪ್ಪ ರಾಮಣ್ಣ ಗೊಲ್ಲರ್ ಆಗಿದ್ದಾನೆ. ಈತನು ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ದಾಳಿ ಮಾಡಿ ತಲೆ ಕೈ ಕಾಲುಗಳಿಗೆ ಕಚ್ಚಿ ಗಾಯಪಡಿಸಿದೆ. ಅಕ್ಕ ಪಕ್ಕದ ಗದ್ದೆಗಳಲ್ಲಿ ರೈತರು ಕರಡಿಯಿಂದ ರಕ್ಷಣೆ ಮಾಡಿ ಆತನನ್ನು ಕಾತೂರ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ತಾಲೂಕಾ ಆಸ್ಪತ್ರೆಗೆ ಅರಣ್ಯ ಇಲಾಖೆಯ ವಾಹನದಲ್ಲಿ ದಾಖಲಿಸಲಾಗಿದೆ.
ಸ್ಥಳಕ್ಕೆ ಕಾತೂರ ವಲಯದ ಅರಣ್ಯಾಧಿಕಾರಿ ಅಜಯ ನಾಯ್ಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಕರಡಿದಾಳಿ ಹೇಗೆ ಹಾಗೂ ಎಲ್ಲಿ ನಡೆದಿದೆ ಎಂಬ ಸತ್ಯಾಂಶ ಅರಣ್ಯ ಇಲಾಖೆಯವರಿಂದ ತಿಳಿಯಬೇಕಾಗಿದೆ.