ಮುಂಬೈಯಲ್ಲಿ ಉಗ್ರ ಯಾಕೂಬ್ ಮೆನನ್ ಸಮಾಧಿ ಸೌಂದರ್ಯೀಕರಣ: ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಯನ್ನ ಅಮೃತಶಿಲೆಯ ಗಡಿ ಮತ್ತು ಎಲ್‌ಇಡಿ ಲೈಟಿಂಗ್‌ನೊಂದಿಗೆ ನವೀಕರಿಸಲಾಗಿದ್ದು, ವಿವಾದ ಭುಗಿಲೆದ್ದಿದೆ.
ಈ ಕುರಿತು ಖಾಸಗಿ ಮಾಧ್ಯಮವೊಂದು ವಿಷಯವನ್ನು ಬೆಳಕಿಗೆ ಬಂದಿದ್ದು, ಇದರಿಂದ ಅಲರ್ಟ್ ಆದ ಮಹಾರಾಷ್ಟ್ರ ಸರ್ಕಾರವು ತನಿಖೆಗೆ ಆದೇಶಿಸಿದೆ.
ಈ ಸಂಗತಿ ಬೆಳಕಿಗೆ ಬಂದ್ಮೇಲೆ ಯಾಕೂಬ್ ಮೆಮೊನ್ ಸಮಾಧಿಯ ಸುತ್ತಲೂ ಅಲಂಕಾರಿಕ ಎಲ್‌ಇಡಿ ದೀಪಗಳನ್ನು ಇಂದು ಬೆಳಿಗ್ಗೆ ತೆಗೆದುಹಾಕಲಾಯಿಗಿದೆ.
ಜುಮಾ ಮಸೀದಿಯ ಅಧ್ಯಕ್ಷರು ಸಮಾಧಿಯನ್ನು ಅಲಂಕರಿಸಲಾಗಿದೆ ಎಂದು ಒಪ್ಪಿಕೊಂಡಿದ್ದು, ಯಾಕೂಬ್ ಅವರ ಸಮಾಧಿಗೆ ಹಾಗೆ ಮಾಡಲು ಯಾವುದೇ ವಿಶೇಷ ಅನುಮತಿಯನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಯಾಕೂಬ್ ನನ್ನು ಸಮಾಧಿ ಮಾಡುವ ಬಡಾ ಕಬ್ರಸ್ತಾನ್ ಸ್ಥಳವು ಸಮಾಧಿ ವಕ್ಫ್ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿ ಎಂವಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಧವ್ ಠಾಕ್ರೆ ಅವರ ಆಳ್ವಿಕೆಯಲ್ಲಿ ಇದನ್ನು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!