ಹೊಸದಿಗಂತ ವರದಿ,ಹುಬ್ಬಳ್ಳಿ:
ಬಿಜೆಪಿ ವಿರುದ್ಧ ಶೆ. ೪೦ ರಷ್ಟು ಕಮಿಷನ್ ಆರೋಪ ಮಾಡುತ್ತಿರುವುದು ಕಾಂಗ್ರೆಸ್ನ ಗುತ್ತಿಗೆದಾರರ ಕಥೆಯಾಗಿದೆ. ಈ ಎಲ್ಲ ಆರೋಪ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಒಳತಂತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ ಕಟೀಲು ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್ ನಾಯಕರ ಹತ್ತಿರ ಸಾಕ್ಷಿ ಆಧಾರಗಳಿದ್ದರೆ ಲೋಕಾಯುಕ್ತಕ್ಕೆ ದೂರ ನೀಡಲಿ. ಕಾಂಗ್ರೆಸ್ನಲ್ಲಿ ಅತೀ ಹೆಚ್ಚು ಜನರು ಗುತ್ತಿಗೆದಾರರಿದ್ದಾರೆ. ಕಾಂಗ್ರೆಸ್ನಲ್ಲಿ ಟಿಕೆಟ್ ಕೇಳುತ್ತಿದ್ದಾರೆ. ಆದರಿಂದ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರು ಟಿಕೆಟ್ ಬೇಕಾದರೆ ಬಿಜೆಪಿಯವರ ವಿರುದ್ಧ ಆರೋಪ ಮಾಡಿ ಎಂದು ಹೇಳಿರಬಹುದು ಎಂದು ಕಟೀಲು ಆರೋಪಿಸಿದರು.
ಇನ್ನು ಮೊನ್ನೆ ನಡೆದ ಬಿಜಾಪುರ, ಕೊಳ್ಳೆಗಾಲ ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿದೆ. ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುವೆ. ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆ ಎಂದರು.
ಜನರು ಕಾಂಗ್ರೆಸ್ ಮಾಡುತ್ತಿರುವ ಕಮಿಷನ್ ಆರೋಪವನ್ನು ನಂಬಿಲ್ಲ. ಕಾಂಗ್ರೆಸ್ನ್ನು ತಿರಸ್ಕಾರ ಮಾಡಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ರಾಹುಲ್ ಗಾಂ ಪಾದಯಾತ್ರೆ ಮಾಡಿದರುವ ಕ್ಷೇತ್ರದಲ್ಲಿಯೇ ಬಿಜೆಪಿಗೆ ಹೆಚ್ಚು ಮತಗಳಿಸಿದೆ. ಭಾರತ ಜೋಡೋದಿಂದ ಯಾರಿಗೂ ಪರಿಣಾಮ ಬೀರಿಲ್ಲ ಎಂದು ತಿಳಿಸಿದರು.