ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲದ ಅಧಿವೇಶನ ಇಂದು ಒಂದು ಗಂಟೆ ತಡವಾಗಿ ಆರಂಭವಾಗಿದ್ದು, ಸದಸ್ಯರು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನದ ನಿಯಮಗಳ ಪ್ರಕಾರ ಸರಿಯಾದ ಸಮಯಕ್ಕೆ ಅಧಿವೇಶನ ಆರಂಭವಾಗಬೇಕು. ಆದರೆ ಒಂದು ಗಂಟೆ ತಡವಾಗಿ ಕಲಾಪ ಆರಂಭವಾಗಿದ್ದು, ಸದಸ್ಯರು ಸ್ಪೀಕರ್ ಯು.ಟಿ. ಖಾದರ್ ಅವರನ್ನು ಪ್ರಶ್ನಿಸಿದ್ದಾರೆ.
ಮೊದಲ ದಿನವೇ ಒಂದು ಗಂಟೆ ವಿಳಂಬವಾದರೆ ಹೇಗೆ? ಈ ಮೂಲಕ ದೇಶಕ್ಕೆ ನಾವು ಯಾವ ರೀತಿ ಸಂದೇಶ ಕೊಡುತ್ತೇವೆ? ಕಾರಣವೇ ಇಲ್ಲದೆ ವಿಳಂಬವಾಗುತ್ತಿರುವುದು ತಪ್ಪು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.