ಭಗವಂತ ಮಾನ್ ಆಸ್ಪತ್ರೆ ಸೇರಿದ್ದು ಕಲುಷಿತ ನೀರು ಕುಡಿದಿದ್ದಕ್ಕಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ ಅವರಿಗೆ ಅನಾರೋಗ್ಯವುಂಟಾಗಿ ದಿಲ್ಲಿಯ ಸರಿತಾ ವಿಹಾರ್ ಪ್ರದೇಶದ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲು ಮಾಡಲಾಗಿತ್ತು. ಸಿಎಂ ಭಗವಂತ್‌ ಮಾನ್‌ಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಪಾಸಣೆ ನಡೆಸಿದ ವೈದ್ಯರು, ಉದರದಲ್ಲಿ ಸೋಂಕು ಉಂಟಾಗಿದೆ ಎಂದು ಚಿಕಿತ್ಸೆ ನೀಡುತ್ತಿದ್ದರು. ಈ ನಡುವೆ ಇದ್ದಕ್ಕಿದ್ದಂತೆ ಸಿಎಂ ಅನಾರೋಗ್ಯಕ್ಕೆ ಕಾರಣ ಬಗ್ಗೆ ಕೆಲವು ಗುಮಾನಿ ಹರಡಿತ್ತು.

ಇದೀಗ ಅದೇ ಪಕ್ಷದ ಕಾರ್ಯಕರ್ತರು ಪೋಸ್ಟ್‌ ಮಾಡಿರುವ ವಿಡಿಯೋ ವೈರಲ್‌ ಆಗಿ ನಗೆಪಾಟಲಿಗೆ ಕಾರಣರಾಗಿದ್ದಾರೆ. ಗುರುನಾನಕ್ ಸಾಹಿಬ್ ಅವರ ಪಾದ ಮುಟ್ಟಿದ ನಾಡು ಸುಲ್ತಾನಪುರ ಲೋಧಿ ಪಂಜಾಬ್‌ ಜನರ ಪವಿತ್ರ ಸ್ಥಳವಾಗಿದ್ದು, 22ನೇ ವಾರ್ಷಿಕೋತ್ಸವದ ಕಾರ್ಯಕ್ರಮದ ನಿಮಿತ್ತ ಕಳೆದ ಭಾನುವಾರ ಭೇಟಿ ನೀಡಿದ್ದ ಮಾನ್ ಈ ವೇಳೆ ಅಲ್ಲಿನ ನದಿ ನೀರು ಕುಡಿದಿದ್ದಾರೆ. ನದಿ ಸಂಪೂರ್ಣ ಸ್ವಚ್ಛವಾಗಿದೆ ಎಂದು ಜನರಿಗೆ ಹೇಳಲು ಸ್ವತಃ ತಾವೇ ಲೋಟದಿಲ್ಲಿ ನೀರು ತುಂಬಿಕೊಂಡು ಕುಡಿದಿದ್ದಾರೆ. ಬಳಿಕವೇ ಭಗವಂತ್‌ ಮಾನ್‌ಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು. ನದಿ ನೀರು ಕಲುಷಿತವಾಗಿದ್ದರಿಂದಲೇ ಅನಾರೋಗ್ಯ ಉಂಟಾಗಿದೆ ಎಂದು ಜನ ಕೀಟಲೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!