ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನ ತತ್ತರಿಸಿ ಹೋಗಿದೆ. ಭಾರತೀಯ ಸೇನೆಯು ಉಗ್ರರ ನೆಲೆಗಳ ಮೇಲೆ ದಾಳಿ ಮಡಿದ ಬೆನ್ನಲ್ಲೇ ಪಾಕ್ ಸರ್ಕಾರ ತುರ್ತಾಗಿ ಅಧಿವೇಶನ ನಡೆಸಿದೆ. ಈ ವೇಳೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಭಾರತದ ‘ಆಪರೇಷನ್ ಸಿಂದೂರ’ ಬಗ್ಗೆ ಹಲವು ಸುಳ್ಳು ಸುದ್ದಿಗಳನ್ನು ಹೇಳಿದ್ದಾರೆ.
ಹಾಗಿದ್ರೆ ಪಾಪಿ ಪಾಕಿಸ್ತಾನದ ಪ್ರಧಾನಿ ಹೇಳಿದ ಸುಳ್ಳುಗಳು ಯಾವುವು ಗೊತ್ತಾ? ಇಲ್ಲಿದೆ ಡೀಟೇಲ್ಸ್;
- ಪ್ರಧಾನಿ ಷರೀಫ್ ತಮ್ಮ ಹೇಳಿಕೆಯಲ್ಲಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ನನ್ನು ಕೊಂಡಾಡಿದ್ದಾರೆ. ಮುನೀರ್ ಅವರಿಂದಾಗಿ ಪಾಕಿಸ್ತಾನ್ ಬಚಾವ್ ಆಗಿದೆ ಎಂಬ ಅರ್ಥದಲ್ಲಿ ಮಾತನ್ನಾಡಿದ್ದಾರೆ.
- ಭಾರತೀಯ ಜೆಟ್ಗಳು ತಮ್ಮದೇ ವಾಯುಪ್ರದೇಶದಿಂದ ಪಾಕಿಸ್ತಾನದ ಗುರಿಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿವೆ ಎಂದಿದ್ದಾರೆ. ಪಾಕ್ ಸೇನೆ ಭಾರತದ ಜೆಟ್ಗಳ ಸಂವಹನ ವ್ಯವಸ್ಥೆಯನ್ನು ಸ್ಥಗಿತಗೊಳಿಸಿವೆ. ಹಾಗೆ ಮಾಡುವ ಮೂಲಕ ಭಾರತದ ಯುದ್ಧ ವಿಮಾನಗಳು ವಾಪಸ್ ಹೋದವು ಎಂದಿದ್ದಾರೆ.
- ನಮ್ಮ ಸೇನೆ ಸಂಪೂರ್ಣ ಸಿದ್ಧವಾಗಿದೆ ಎಂದು ಷರೀಫ್ ಹೇಳಿದ್ದಾರೆ. ಆದರೆ ಪಾಕ್ ಸೇನೆಯ ಅಡಿಯಲ್ಲೇ ಇರುವ 9 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ಭಾರತ ಅಟ್ಯಾಕ್ ಮಾಡಿದೆ. ಪಾಕ್ ಸೇನೆಯು ಭಾರತದ ನಿಖರ ದಾಳಿಗಳಿಂದ ಪಾರಾಗಲು ಸನ್ನದ್ಧವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.
ಪಾಕ್ ಪ್ರಧಾನಿ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದೆ. ಅವರ ಸೇನೆಗೆ, ಅಲ್ಲಿನ ಸರ್ಕಾರಕ್ಕೆ ಪಾಕ್ ಮಾಧ್ಯಮಗಳೂ ಕೈಜೋಡಿಸಿವೆ. ಹಳೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿಯನ್ನು ಹರಡುತ್ತಿದೆ.