ಪಹಲ್ಗಾಮ್‌ ಅಟ್ಯಾಕ್‌ ಮಾಸ್ಟರ್ ಮೈಂಡ್ ಶೇಖ್‌ ಸಜ್ಜದ್‌ ಗುಲ್‌ಗೆ ಕರ್ನಾಟಕ-ಕೇರಳದ ನಂಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರನ್ನು ಬಲಿ ತೆಗೆದುಕೊಂಡಿದ್ದ ಉಗ್ರ ದಾಳಿ ಮಾಸ್ಟರ್ ಮೈಂಡ್ ಶೇಖ್ ಸಜ್ಜದ್ ಗುಲ್ ಗೆ ಕರ್ನಾಟಕ ಮತ್ತು ಕೇರಳದ ನಂಟಿತ್ತು ಎಂದು ತನಿಖೆಯಲ್ಲಿ ದೃಢಪಟ್ಟಿದೆ.

ದಾಳಿ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಾಸ್ಟರ್ ಮೈಂಡ್ ಶೇಖ್ ಸಜ್ಜದ್ ಗುಲ್ ಕಾಶ್ಮೀರದಲ್ಲಿ ಲಷ್ಕರ್-ಎ-ತೈಬಾ ಪ್ರಾಕ್ಸಿ, ದಿ ರೆಸಿಸ್ಟೆನ್ಸ್ ಫ್ರಂಟ್‌ನಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ. ಸಜ್ಜದ್ ಅಹ್ಮದ್ ಶೇಖ್ ಎಂದೂ ಕರೆಯಲ್ಪಡುವ ಗುಲ್, ಎಲ್‌ಇಟಿ ರಕ್ಷಣೆಯಲ್ಲಿ ಪ್ರಸ್ತುತ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ವರದಿಯಾಗಿದೆ.

2020 ರಿಂದ 2024 ರವರೆಗೆ ಮಧ್ಯ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದ ಟಾರ್ಗೆಟ್ ಕಿಲ್ಲಿಂಗ್ಸ್, 2023 ರಲ್ಲಿ ಮಧ್ಯ ಕಾಶ್ಮೀರದಲ್ಲಿ ಗ್ರೆನೇಡ್ ದಾಳಿಗಳು ಮತ್ತು ಬಿಜ್‌ಬೆಹ್ರಾ, ಗಗಂಗೀರ್‌ನಲ್ಲಿ ಜೆ & ಕೆ ಪೊಲೀಸ್ ಸಿಬ್ಬಂದಿಯ ಮೇಲೆ ಹೊಂಚುದಾಳಿಗಳು ಮತ್ತು ಗಂದರ್‌ಬಾಲ್‌ನ ಝಡ್-ಮೋರ್ಹ್ ಸುರಂಗ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಅವನು ಸಂಬಂಧ ಹೊಂದಿದ್ದಾನೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಏಪ್ರಿಲ್ 2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಭಯೋತ್ಪಾದಕ ಎಂದು ಹೆಸರಿಸಿದ ಗುಲ್, ತಲೆ ಮೇಲೆ ರೂ 10 ಲಕ್ಷ ಬಹುಮಾನ ಘೋಷಿಸಲಾಗಿದೆ. ಪಹಲ್ಗಾಮ್ ದಾಳಿಯ ತನಿಖೆ ನಡೆಸುವ ತನಿಖಾಧಿಕಾರಿಗಳು ಅವನೊಂದಿಗೆ ಸಂವಹನ ಸಂಪರ್ಕವನ್ನು ಪತ್ತೆಹಚ್ಚಿದ್ದಾರೆ. ಪಹಲ್ಗಾಮ್ ದಾಳಿಯನ್ನು ಆಯೋಜಿಸುವಲ್ಲಿ ಅವನ ಪಾತ್ರವು ದೃಢಪಟ್ಟಿದೆ. ಹತ್ಯಾಕಾಂಡದ ಹೊಣೆ ಹೊತ್ತ ಟಿಆರ್‌ಎಫ್, ಅವರ ಆದೇಶದ ಮೇರೆಗೆ ಈತ ಕಾರ್ಯನಿರ್ವಹಿಸಿದ್ದ ಎಂದು ನಂಬಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!