ಗುರಾಯಿಸಿದ್ದನ್ನು ಪ್ರಶ್ನಿಸಿದ್ದೇ ತಪ್ಪೆಂದು ಸಿಟ್ಟಿಗೆದ್ದು ಚಾಕು ಹಿರಿದ ಭೂಪ!

ಹೊಸದಿಗಂತ ವರದಿ, ಚಿತ್ರದುರ್ಗ:

ತಾನು ಗುರಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕನೋರ್ವ ಪ್ರಶ್ನೆ ಮಾಡಿದ ವ್ಯಕ್ತಿಗೆ ಚಾಕು ಹಿರಿದು ಗಾಯಗೊಳಿಸಿರುವ ಘಟನೆ ಹಿರಿಯೂರು ತಾಲ್ಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಆಲೂರು ಗ್ರಾಮದ ಸಮೀವುಲ್ಲಾ ಗಾಯಗೊಂಡ ವ್ಯಕ್ತಿ. ನೂತನ್ ಎಂಬ ಯುವಕ ಚಾಕು ಹಿರಿದ ಆರೋಪಿ.
ಇವರಿಬ್ಬರೂ ಹಿರಿಯೂರು ತಾಲ್ಲೂಕಿನ ಆಲೂರು ಗ್ರಾಮದವರೇ ಆಗಿದ್ದಾರೆ. ಶನಿವಾರ ಸಂಜೆ ಗ್ರಾಮದಲ್ಲಿ ನಿಂತಿದ್ದಾಗ ಆರೋಪಿ ನೂತನ್, ಸಮೀವುಲ್ಲಾ ಅವರನ್ನು ಗುರಾಯಿಸಿದ್ದಾನೆ. ಈ ಸಮೀವುಲ್ಲಾ ತನ್ನನ್ನು ಗುರಾಯಿಸಿದ ಕುರಿತು ನೂತನ್‌ನನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅಲ್ಲೇ ಇದ್ದ ಗ್ರಾಮದ ಕೆಲವರು ನೂತನ್‌ನನ್ನು ಬೈದಿದ್ದಾರೆ.
ಇದರಿಂದ ಸಿಟ್ಟಿಗೆದ್ದ ನೂತನ್ ಮನೆಗೆ ಹೋಗಿ ಚಾಕು ತಂದು ಸಮೀವುಲ್ಲಾ ಅವರಿಗೆ ಹಿರಿದು ಗಾಯಗೊಳಿಸಿದ್ದಾನೆ. ಗಾಯಾಳು ಸಮೀವುಲ್ಲಾ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ನೂತನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!