BIG BOSS | ಬಿಗ್​​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವೆ ಹೊತ್ತಿಕೊಂಡ ನಾಮಿನೇಷನ್‌ ಕಿಚ್ಚು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಕನ್ನಡ ಸೀಸನ್ 10 ಅಂತಿಮ ಘಟಕ್ಕೆ ತಲುಪಿದೆ. ಫೈನಲ್‌ನಲ್ಲಿ ಯಾರು ಚಾಂಪಿಯನ್‌ ಆಗುತ್ತಾರೆ ಎಂದು ಕುತೂಹಲಕ್ಕೆ ತೆರೆಬೀಳಲಿದೆ. ನಾಮಿನೇಷನ್‌ ಕಿಚ್ಚು ಆರಂಭವಾಗಿದೆ ಮತ್ತು ಯಾರೆಲ್ಲ ನಾಮಿನೇಷ್‌ ಆಗಿದ್ದಾರೆ ಎಂದು ಪ್ರೋಮೊದಲ್ಲಿ ಹೊರಬಂದಿದೆ.

ಈ ವಾರದ ನಾಮಿನೇಷನ್‌ನಲ್ಲಿ, ಗೆಲುವಿನ ಕಿಚ್ಚಿಗೆ ಇಬ್ಬರು ಸದಸ್ಯರು ಬಲಿಯಾಗಬೇಕು ಎಂದು ಬಿಗ್‌ಬಾಸ್‌ ಸೂಚಿಸಿದ್ದರು. ಅದರಂತೆ, ಸದಸ್ಯರು ತಾವು ನಾಮಿನೇಟ್‌ ಮಾಡುವ ಇಬ್ಬರ ಫೋಟೊ ಬೆಂಕಿಗೆ ಹಾಕಿ ಸುಡಬೇಕು ಎಂದು ಹೇಳಿದ್ದರು.

ಈ ಹಿಂದೆ, ಸಂಗೀತಾ ಶೃಂಗೇರಿ ಮತ್ತು ಡ್ರೋನ್‌ ಪ್ರತಾಪ್‌ ಮಧ್ಯೆ ಉತ್ತಮ ಬಾಂಧವ್ಯ ಬೆಸೆದಿತ್ತು. ಆದರೆ ಕೆಲವು ದಿನಗಳಿಂದ ಇಬ್ಬರ ಮಧ್ಯೆ ಬಿರುಕು ಮೂಡಿದೆ. ಈಗ, ಪ್ರತಾಪ್‌ ಹೆಸರನ್ನು ನಾಮಿನೇಟ್‌ ಮಾಡಿದ ಸಂಗೀತಾ ಬೇರೆ ಕಂಡು ಬಂದಿದೆ. ನಾನು ನೋಡಿದ ಪ್ರತಾಪ್‌ ಬೇರೆ, ಈಗಿರುವ ಪ್ರತಾಪ್‌ ಬೇರೆ. ನಾನು ಇಷ್ಟರವರೆಗೆ ಸಪೋರ್ಟ್‌ ಮಾಡುತ್ತಿದ್ದ ಪ್ರತಾಪ್‌ ಈಗ ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ತನಿಷಾ, ತುಕಾಲಿ ಸಂತೋಷ್‌ ಅವರು ಕಾರ್ತಿಕ್‌ ಫೋಟೊವನ್ನು ಬೆಂಕಿಗೆ ಹಾಕಿದ್ದಾರೆ. ಅವರು ಹೇಳಿದ್ದರು, “ಕಾರ್ತಿಕ್‌ ಇತ್ತೀಚೆಗೆ ಉತ್ತಮವಾಗಿ ಆಟ ಆಡುತ್ತಿಲ್ಲ, ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಂಡು ಬರುತ್ತಿಲ್ಲ ಎಂದಿದ್ದಾರೆ.

ತನಿಷಾ ಇನ್ನು ಮಾತನಾಡಿ, ಕಾರ್ತಿಕ್‌ ಹೇಳಿದ ಮಾತನ್ನು ಉಳಿಸಿಕೊಳ್ಳಲ್ಲ. ಅವನು ನನ್ನ ಎದೆಗೆ ಚುಚ್ಚಿದರೆ, ನಾನು ನೇರವಾಗಿ ಬೆಂಕಿಗೆ ಹಾಕುತ್ತೇನೆ ಮತ್ತು ಸುಟ್ಟು ಪುಡಿಯಾಗಿ ಬೂದಿಯೂ ಸಿಗದಷ್ಟು ಕ್ರೂರಿಯಾಗುತ್ತೇನೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!