BIG NEWS | ಪ್ರಧಾನಿ ಮೋದಿಯವರತ್ತ ಹೂವಿನೊಂದಿಗೆ ಮೊಬೈಲ್ ಎಸೆತ: ಭದ್ರತಾ ಪಡೆ ಅಲರ್ಟ್!

ಹೊಸದಿಗಂತ ವರದಿ, ಮೈಸೂರು:

ಪ್ರಧಾನಿ ನರೇಂದ್ರ ಮೋದಿಯವರು ಅರಮನೆ ನಗರಿ ಮೈಸೂರಿನಲ್ಲಿ ಭಾನುವಾರ ಸಂಜೆ ನಡೆಸಿದ ರೋಡ್ ಶೋ ವೇಳೆ ಹೂವಿನೊಂದಿಗೆ ಮೊಬೈಲ್‌ವೊಂದು ತೂರಿ ಬಂದು ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿತು.

ಮೋದಿಯವರು ರೋಡ್ ಶೋ ನಡೆಸಿಕೊಂಡು ಚಿಕ್ಕಗಡಿಯಾರದ ಹತ್ತಿರ ಬರುತ್ತಿದ್ದಂತೆ ರಸ್ತೆಯ ಇಕ್ಕಲೆಗಳಲ್ಲಿ ನಿಂತಿದ್ದ ಅಭಿಮಾನಿಗಳು ಹೂವುಗಳನ್ನು ಮೋದಿಯವರು ನಿಂತಿದ್ದ ರಥದತ್ತ ಎಸೆಯುತ್ತಿದ್ದರು. ಈ ವೇಳೆ ಹೂವಿನೊಂದಿಗೆ ಮೊಬೈಲ್‌ವೊಂದು ಕೂಡ ಮೋದಿಯವರತ್ತ ತೂರಿ ಬಂತು. ಅದು ಜನರತ್ತ ಕೈಬೀಸುತ್ತಿದ್ದ ಮೋದಿಯವರ ಕೈಗೆ ತಗುಲದೆ ಸ್ವಲ್ಪ ಅಂತರದಲ್ಲಿ ಮಿಸ್ ಆಗಿ ವಾಹನದ ಮೇಲೆ ಬಿತ್ತು.

ಮೊಬೈಲ್ ತೂರಿ ಬಂದಿದ್ದನ್ನು ಮೋದಿಯವರೇ ಭದ್ರತೆಯವರ ಹಾಗೂ ಜನರ ಗಮನ ಸೆಳೆದರು. ಇದರಿಂದಾಗಿ ಪೊಲೀಸರು ಹಾಗೂ ಭದ್ರತಾಪಡೆಯವರು ಬೆಚ್ಚಿ ಬಿದ್ದರು. ಮೊಬೈಲ್‌ನ್ನು ಯಾರು, ಯಾವ ಕಾರಣಕ್ಕೆ ಎಸೆದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!