ಹೊಸ ದಿಗಂತ ಡಿಜಿಟಲ್ ಡೆಸ್ಕ್:
2 ವರ್ಷಗಳ ನಂತರ ಜೂನ್ 14 ರಂದು ಪುರಿ ಭಗವಾನ್ ಜಗನ್ನಾಥ ಸನ್ನಿಧಿಯಲ್ಲಿ ʻತೀರ್ಥಸ್ನಾನʼಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
‘ಸ್ನಾನ ಜಾತ್ರಾ’ ಮಹೋತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲು ಶ್ರೀ ಜಗನ್ನಾಥ ದೇವಾಲಯದ ಆಡಳಿತವು ಸೇವಕರೊಂದಿಗೆ ನಡೆದ ಸಭೆಯ ಬಳಿಕ ನಿರ್ಧಾರ ತೆಗೆದುಕೊಂಡಿದೆ.
ಈ ಬಾರಿ, ಭಕ್ತರು ಜೂನ್ 14 ರಂದು ಗ್ರ್ಯಾಂಡ್ ರೋಡ್ ನಿಂದ ಜಗನ್ನಾಥ, ಭಗವಾನ್ ಬಲಭದ್ರ, ಭಗವಾನ್ ಸುದರ್ಶನ ಮತ್ತು ದೇವಿ ಸುಭದ್ರಾ ಮತ್ತು ಸ್ನಾನ ಬಲಿಪೀಠದ ದರುಶನ ಪಡೆಯಬಹುದು. ಅದೇ ದಿನ ದೇವತೆಗಳು ‘ಹತಿ ಭೇಸಾ’ ಅಲಂಕರಿಸಲಿದ್ದಾರೆ’ ಎಂದು ಎಸ್ಜೆಟಿಎ ಅಧಿಕಾರಿ ದುರ್ಗಾ ದಾಶ್ ಮೋಹಪಾತ್ರ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ, ಕೋವಿಡ್ -19 ಪ್ರಕರಣಗಳ ಹೆಚ್ಚಳದ ನಡುವೆ ಭಕ್ತರಿಗೆ ‘ಸ್ನಾನ ಜಾತ್ರಾ’ದಲ್ಲಿ ಸೇರಲು ಅನುಮತಿ ನಿರಾಕರಿಸಲಾಗಿತ್ತು.