ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನಿಮ್ಮ ಮಗನ ಶವ ಬೇಕಂದ್ರೆ 50 ಸಾವಿರ ಹಣ ನೀಡಿ ಎಂದು ಆಸ್ಪತ್ರೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು. ಕಡುಬಡತನದಲ್ಲಿರುವ ವೃದ್ಧ ದಂಪತಿಗೆ ಅಷ್ಟು ದೊಡ್ಡ ಮೊತ್ತದ ಹಣ ಹೊಂದಿಸಲು ಬೇರೆ ದಾರಿಯಿಲ್ಲದೆ ಭಿಕ್ಷಾಟನೆ ಮಾಡಿದ್ದಾರೆ. ಈ ವೃದ್ಧ ದಂಪತಿಯ ಮಗ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಮಗನಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ದ ವೃದ್ಧರಿಗೆ, ನಿಮ್ಮ ಮಗ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿ ಶವವಾಗಿದ್ದಾನೆ ಬಂದು ಡೆಡ್ ಬಾಡಿ ತೆಗೆದುಕೊಂಡು ಹೋಗುವಂತೆ ಕರೆ ಮಾಡಿದ್ದಾರೆ. ಕೂಡಲೇ ಕಣ್ಣಲ್ಲಿ ನೀರು ತುಂಬಿಕೊಂಡು ಮಗನ ಶವ ನೋಡಲು ಆಸ್ಪತ್ರೆಗೆ ತೆರಳಿದ ದಂಪತಿ ಆ ಮೃತದೇಹ ತಮ್ಮ ಪುತ್ರನೆಂದು ಖಚಿತಪಡಿಸಿದರು.
ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಲು ಅಧಿಕಾರಿಗಳ ಜೊತೆಗೆ ಮಾತನಾಡಿದರು. ಆದರೆ, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಬೇಡಿಕೆ ಕೇಳಿದ ವೃದ್ಧ ದಂಪತಿಗೆ ಒಮ್ಮೆಲೆ ಆಘಾತ ಆಗಿದೆ. ಮಗನ ಮೃತದೇಹ ಬೇಕಾದರೆ 50ಸಾವಿರ ರೂಪಾಯಿ ಕೊಡಿ ಎಂದಿದ್ದಾನೆ. ವೃದ್ಧ ದಂಪತಿಗಳ ಬಳಿ ನೀಡಲು ಹಣವಿಲ್ಲದೆ, ಭಿಕ್ಷೆ ಬೇಡಲು ಪ್ರಾರಂಭಿಸಿದರು. ಮನೆ, ರಸ್ತೆ ಸುತ್ತಾಡಿ ಭಿಕ್ಷೆ ಬೇಡಿದ್ದಾರೆ.
समस्तीपुर- जवान बेटे का पोस्टमार्टम के लिए माता पिता कर रहा है भिक्षाटन,पोस्टमार्टम कर्मी ने कहा 50 हज़ार लाओ और बेटे का शव ले जाओ।
यहां जीना भी मुश्किल और मरना भी मुश्किल।#बिहार pic.twitter.com/SZew1K1rwL
— Mukesh singh (@Mukesh_Journo) June 8, 2022
ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಾಕಿದ್ದಾನೆ. ವೀಡಿಯೋ ವೈರಲ್ ಆದ ನಂತರ ಲಂಚಕ್ಕೆ ಬೇಡಿಕೆಯಿಟ್ಟ ನೌಕರನನ್ನು ಕೂಡಲೇ ಕೆಲಸದಿಂದ ತೆಗೆದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಸಮಸ್ತಿಪುರ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಮಾತನಾಡಿ, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದು, ಲಂಚ ಕೇಳಿದ ನೌಕರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದಕ್ಕೆ ಕಾರಣರಾದವರನ್ನು ಬಿಟ್ಟಿರುವುದು ಮಾನವೀಯತೆಗೆ ಅವಮಾನ ಎಂದು ಹೇಳಿದರು.